Advertisement

ಸುದ್ದಿ ಇದು ಸುದ್ದಿ…

04:21 PM Feb 03, 2018 | Team Udayavani |

ಸುದ್ದಿಯನ್ನು ಕೇವಲ ಸುದ್ದಿಯನ್ನಾಗಿ ಮಾತ್ರ ನೋಡಬೇಕು. ಆದರೆ, ಈಗಿನ ಸುದ್ದಿ ಮಾಧ್ಯಮಗಳು ಯಾವುದಾದರೂ ಘಟನೆ ನಡೆದಾಗ ಅದಕ್ಕೆ ಬೇಕಾದಂತೆ ಬಣ್ಣ ಬಳಿಯುವ, ಸುದ್ದಿಯನ್ನು ರಾಜಕೀಯಗೊಳಿಸುವ, ನ್ಯಾಯ ತೀರ್ಮಾನಕ್ಕೆ ಇಳಿದು ಬಿಡುವ ಕೆಲಸ ಮಾಡುತ್ತಿವೆ… ಮಾಧ್ಯಮಗಳ ಮೇಲೆ ಜನ ಹೀಗೆಲ್ಲಾ ಆರೋಪಿಸುವುದನ್ನು ಕೇಳಿರುತ್ತೇವೆ.

Advertisement

ಇದನ್ನೇ ಮೂಲವಾಗಿಟ್ಟುಕೊಂಡು, “ಸುದ್ದಿ ಇದು ಸುದ್ದಿ’ ಎಂಬ ನಾಟಕವನ್ನು ರಚಿಸಲಾಗಿದೆ. ಸಾಫ್ಟ್ವೇರ್‌ ಇಂಜಿನಿಯರ್‌ಗಳು ನಿರ್ಮಿಸಿ, ನಟಿಸಿದ್ದು, ಕೆ.ಆರ್‌. ಗಣೇಶ್‌ ಇದರ ನಿರ್ದೇಶಕರು. ಐಐಎಂ ಬೆಂಗಳೂರಿನ ಪ್ರೊಫೆಸರ್‌ ಎಂ.ಎಸ್‌.ಶ್ರೀರಾಂ ಅವರ ಸಣ್ಣಕಥೆಯನ್ನಾಧರಿಸಿದ ನಾಟಕ ಇದು. ಟೆಕೆಟ್‌ಗಳು ಬುಕ್‌ವೆುಶೋನಲ್ಲಿ ಲಭ್ಯವಿದ್ದು, ದರ 100 ರೂ. 

ಎಲ್ಲಿ?: ರಂಗಶಂಕರ, ಜೆಪಿ ನಗರ
ಯಾವಾಗ?: ಫೆ.4, ಭಾನುವಾರ ಮ.3.30

Advertisement

Udayavani is now on Telegram. Click here to join our channel and stay updated with the latest news.

Next