Advertisement

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

06:31 PM Oct 25, 2021 | Team Udayavani |
  1. ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್
”ಬಾದಾಮಿಯಲ್ಲಿ 1600 ಓಟಿನಿಂದ ಗೆಲ್ಲದೇ ಹೋಗಿದ್ದರೆ ಸಿದ್ದರಾಮಯ್ಯ ಏನಾಗುತ್ತಿದ್ದರು, ಕಾಟೂರ್ ಫಾರಂ ಅಥವಾ ಸಿದ್ದರಾಮನ ಹುಂಡಿಗೆ ಹೋಗಿ ಹೊಲ ಉಳಬೇಕಾಗಿತ್ತು,ಇಲ್ಲವಾದರೆ ವಿಜಯನಗರ ಮನೆಯಲ್ಲಿ ಕಾಲ ಕಳೆಯಬೇಕಾಗಿತ್ತು” ಎಂದು ಸೋಮವಾರ ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.  
  1. ದಿಗ್ಗಜ ಐಟಿ ಕಂಪನಿಗಳವರ್ಕ್‌ ಫ್ರಮ್‌ ಹೋಮ್”‌ ಅಂತ್ಯ?
  ಟಿಸಿಎಸ್‌ ಮತ್ತು ವಿಪ್ರೋ ಉದ್ಯೋಗಿಗಳಿಗೆ “ವರ್ಕ್‌ ಫ್ರಮ್‌ ಹೋಮ್”ನ ಮಾದರಿಗಳನ್ನೇ ಕಛೇರಿಯಲ್ಲಿ ಮುಂದುವರಿಸಲು ಚಿಂತನೆಗಳು ನಡೆಯುತ್ತಿವೆ. ಹೆಚ್ಚಿನ ಕೆಲಸಗಾರರನ್ನು ಮತ್ತೆ ಕಛೇರಿಗೆ ಬರಮಾಡಿಕೊಳ್ಳುವ ನಿರ್ಧಾರಗಳಾಗಿವೆ. ಆದರೆ ಇನ್ಫೋಸಿಸ್‌ ತನ್ನ  ಉದ್ಯೋಗಿಗಳ ಕೆಲಸದ ವಿಧಾನಗಳನ್ನು ಮನೆಯಿಂದಲೇ ಆಧುನಿಕ ಸ್ಪರ್ಶ ನೀಡಲು ನಿರ್ಧರಿಸಿದೆ.  
  1. ಕಾಶ್ಮೀರದಲ್ಲಿ ಬುಲೆಟ್ ಪ್ರೂಫ್ ಶೀಲ್ಡ್ ತೆಗೆಸಿ ಭಾಷಣ ಮಾಡಿದ ಗೃಹ ಸಚಿವ ಶಾ!
ಉಗ್ರರ ನಿರಂತರ ದಾಳಿಗೆ ಗುರಿಯಾಗುತ್ತಿರುವ ಕಾಶ್ಮೀರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಷಣ ಮಾಡುವ ವೇಳೆ ಪೋಡಿಯಂ ಸುತ್ತ ಹಾಕಲಾಗಿದ್ದ ಬುಲೆಟ್ ಪ್ರೂಫ್ ಗ್ಲಾಸ್ ಶೀಲ್ಡ್ ತೆಗೆಸಿದ ಘಟನೆ ಸೋಮವಾರ ನಡೆದಿದೆ.  
  1. ನವರಾತ್ರಿ ಸಂಭ್ರಮ ಕಳೆದ ಬೆನ್ನಲ್ಲೇ ಪಶ್ಚಿಮಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ
ಕಳೆದ ವಾರ ದುರ್ಗಾ ಪೂಜೆ ಹಬ್ಬ ನಡೆದ ನಂತರ ಪಶ್ಚಿಮಬಂಗಾಳದಲ್ಲಿ ಕೆಲವು ದಿನಗಳಿಂದ ಕೋವಿಡ್ 19 ಸೋಂಕು ಪ್ರಕರಣ ರಾಜ್ಯದಲ್ಲಿ ಹೆಚ್ಚಳವಾಗತೊಡಗಿದೆ. ಭಾನುವಾರ ಪಶ್ಚಿಮಬಂಗಾಳದಲ್ಲಿ 989 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಶನಿವಾರ 974 ಪ್ರಕರಣ ಪತ್ತೆಯಾಗಿತ್ತು. ಅಲ್ಲದೇ ಅಕ್ಟೋಬರ್ 22ರಂದು 846 ಪ್ರಕರಣ, ಅ.21ರಂದು 833 ಹಾಗೂ ಅಕ್ಟೋಬರ್ 20ರಂದು 867 ಪ್ರಕರಣ ವರದಿಯಾಗಿತ್ತು.  
  1. ಪರಮ ಪಾವನೆಯಾಗುವತ್ತ ಗಂಗಾಮಾತೆ
ದೇಶದ ಪವಿತ್ರ ನದಿ ಗಂಗೆಯ ಶುದ್ಧೀಕರಣಕ್ಕಾಗಿ ಕೇಂದ್ರ ಸರಕಾರ ರೂಪಿಸಿದ್ದ “ನ್ಯಾಶನಲ್‌ ಮಿಷನ್‌ ಫಾರ್‌ ಕ್ಲೀನ್‌ ಗಂಗಾ ಯೋಜನೆ’ ಯಶಸ್ಸಿಯತ್ತ ಸಾಗಿದೆ. ಈ ಬಗ್ಗೆ ಯೋಜನೆಯ ಮಹಾ ನಿರ್ದೇಶಕ ರಾಜೀವ್‌ ರಂಜನ್‌ ಮಿಶ್ರಾ ಮಾಹಿತಿ ನೀಡಿದ್ದಾರೆ. 2014ರಲ್ಲಿ ನದಿಯಲ್ಲಿ ಸ್ನಾನ ಮಾಡಲು ಯೋಗ್ಯವಾದ ಸ್ಥಳಗಳ ಸಂಖ್ಯೆ 32ರಷ್ಟಿದ್ದರೆ ಈಗ ಅವುಗಳ ಸಂಖ್ಯೆ 68ಕ್ಕೇರಿದೆ ಎಂದು ತಿಳಿದುಬಂದಿದೆ  
  1. ಬಿಜೆಪಿಯವರು ಕಪಟ, ಹಣ, ತೋಳ್ಬಲದಿಂದ ಗೆಲ್ಲಲು ಹೊರಟಿದ್ದಾರೆ: ಸುರ್ಜೇವಾಲಾ
ಬಿಜೆಪಿಯವರು ಹಣದಿಂದ ಮತ ಖರೀದಿಗೆ ಹೊರಟಿದ್ದಾರೆ. ನಮ್ಮ‌ಅಭ್ಯರ್ಥಿಗಳಿಬ್ಬರು ಬಹಳ ಒಳ್ಳೆಯವರಿದ್ದಾರೆ. ಮಸ್ಕಿಯಲ್ಲಿ ಗೆದ್ದಂತೆ ಇಲ್ಲೂ ನಾವೇ ಗೆಲ್ಲುತ್ತೇವೆ. ಬಿಜೆಪಿಯ ಗರ್ವವನ್ನು ಮತದಾರರು ಮುರಿಯಲಿದ್ದಾರೆ. ಕಪಟ, ಹಣ, ತೋಳ್ಬಲದಿಂದ ಗೆಲ್ಲಲು ಹೊರಟಿದ್ದಾರೆ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಆಕ್ರೋಶ ವ್ಯಕ್ತಪಡಿಸಿದರು.  
  1. ಭಜರಂಗಿ ಜೊತೆ ಸಂಭ್ರಮಿಸಲು ಶಿವಣ್ಣ ಫ್ಯಾನ್ಸ್‌ ರೆಡಿ
ಶಿವರಾಜ್‌ ಕುಮಾರ್‌ ಅಭಿನಯದ “ಭಜರಂಗಿ-2′ ಚಿತ್ರ ಅ.29ಕ್ಕೆ ಬಿಡುಗಡೆಯಾಗುತ್ತಿರೋದು ನಿಮಗೆ ಗೊತ್ತೇ ಇದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ.  
  1. ಹೊಸ ಐಪಿಎಲ್ ತಂಡಕ್ಕಾಗಿ ಪೈಪೋಟಿ: ಅಂತಿಮ ಬಿಡ್ ನಲ್ಲಿ 10 ಕಂಪನಿಗಳು
ಬಿಸಿಸಿಐ ಸಿದ್ದತೆ ಆರಂಭಿಸಿದೆ. ಮುಂದಿನ ಆವೃತ್ತಿಯಿಂದ ಎರಡು ತಂಡಗಳು ಸೇರ್ಪಡೆಯಾಗುವ ಕಾರಣ ಅದರ ಆಯ್ಕೆ ಪ್ರಕ್ರಿಯೆ ಇಂದು ದುಬೈನಲ್ಲಿ ನಡೆಯುತ್ತಿದೆ. ಒಟ್ಟು 22 ಕಂಪನಿಗಳು ಟೆಂಡರ್ ಪಡೆದಿದ್ದು, ಅದರಲ್ಲಿ 10 ಕಂಪನಿಗಳ ಹೆಸರು ಅಂತಿಮ ಸುತ್ತಿನಲ್ಲಿದೆ. ಅಹಮದಾಬಾದ್, ಲಕ್ನೋ, ಕಟಕ್, ಧರ್ಮಶಾಲಾ, ಗುವಾಹಟಿ ಮತ್ತು ಕಟಕ್ ನಗರಗಳ ಪೈಕಿ ಎರಡು ನಗರಗಳ ಹೆಸರಲ್ಲಿ ತಂಡಗಳಿರಲಿವೆ.
Advertisement

Udayavani is now on Telegram. Click here to join our channel and stay updated with the latest news.

Next