Advertisement

ಕ್ರೀಡಾ ಪ್ರೋತ್ಸಾಹಕ್ಕೆ ನೂತನ ಪ್ರಾಯೋಜಕತ್ವ ಯೋಜನೆ

06:45 AM Mar 18, 2018 | Team Udayavani |

ಹೊಸದಿಲ್ಲಿ: ಎಳೆಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವುದಕ್ಕಾಗಿ ಮುಂದೆ ಹೊಸ ಪ್ರಾಯೋಜಕತ್ವ ಯೋಜನೆಯೊಂದು ಬರಲಿದೆ ಎಂದು ಕ್ರೀಡಾ ಸಚಿವ ರಾಜವರ್ಧನ್‌ ಸಿಂಗ್‌ ರಾಥೋಡ್‌ ಹೇಳಿದ್ದಾರೆ. ರವಿವಾರ ಹೊಸದಿಲ್ಲಿಯಲ್ಲಿ ಈ ವಿಚಾರ ತಿಳಿಸಿರುವ ರಾಥೋಡ್‌, ಭವಿಷ್ಯದ ಚಾಂಪಿಯನ್‌ಗಳನ್ನು ಸೃಷ್ಟಿಸಲು ಈ ಯೋಜನೆ ನೆರವಾಗಲಿದೆ ಎಂದಿದ್ದಾರೆ.

Advertisement

ಆರ್ಥಿಕ ಸಮಸ್ಯೆಯಿಂದ ಪ್ರತಿಭೆ ವ್ಯರ್ಥವಾಗುವುದನ್ನು ತಪ್ಪಿಸಲು ಸರಕಾರ ಮುಂದಾಗುತ್ತಿರುವುದಾಗಿ ತಿಳಿಸಿರುವ ಶೂಟಿಂಗ್‌ ದಂತಕತೆ ರಾಥೋಡ್‌, “ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಆರ್ಥಿಸ ಸಮಸ್ಯೆ ಎದುರಾಗುತ್ತದೆ. ಇದನ್ನು ತಪ್ಪಿಸುವುದಕ್ಕಾಗಿ ಕ್ರೀಡಾಪಟುಗಳಿಗೆ ಆರ್ಥಿಕ  ನೆರವು ನೀಡಲು ಸರಕಾರ ಮುಂದಾಗಿದೆ. ಹೀಗಾಗಿ ಆಯ್ದ ಸುಮಾರು 1000 ಮಕ್ಕಳಿಗೆ ಅವರ ಕ್ರೀಡಾ ಕೌಶಲ ಹೆಚ್ಚಿಸಲು ನೆರವಾಗುವಂತೆ ಪ್ರತಿಯೊಬ್ಬರಿಗೂ 8 ವರ್ಷಗಳ ವರೆಗೆ ಒಂದು ಲಕ್ಷ ರೂ.ಗಳ ಪ್ರಾಯೋಜಕತ್ವವನ್ನು ನೀಡಲಿದ್ದೇವೆ. ಇದು ಈವರೆಗಿನ ಯೋಜನೆಗಳಲ್ಲೇ ಮೊದಲ ಪ್ರಾಯೋಜಕತ್ವ ಯೋಜನೆಯಾಗಲಿದೆ’ ಎಂದರು.

“ಮುಂಬರುವ ತಿಂಗಳಿನಿಂದಲೇ ನಾವು 8-12ನೇ ವಯೋಮಾನದ ಕ್ರೀಡಾಳುಗಳನ್ನು ಯೋಜನೆಗಾಗಿ ಆರಿಸಲಿದ್ದೇವೆ. ವಿವಿಧ ವಿದ್ಯಾಭ್ಯಾಸ ಸಂಸ್ಥೆಗಳ ಮೂಲಕ ವಿದ್ಯಾರ್ಥಿಗಳು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಹೇಗೆಂಬುವುದನ್ನು ತಿಳಿಸಲಿದ್ದೇವೆ. ಆಯ್ಕೆ ಪ್ರಕ್ರಿಯೆಯಲ್ಲಿ ನಾವು ಆಧುನಿಕ ಡಿಎನ್‌ಎ ಪರೀಕ್ಷೆಯನ್ನೂ ನಡೆಸುತ್ತೇವೆ. ಅಂತಿಮವಾಗಿ ಆಯ್ಕೆಗೊಳ್ಳುವ ಮಕ್ಕಳಿಗೆ ಪ್ರಾಯೋಜಕತ್ವದ ಪ್ರಯೋಜನ ಸಿಗಲಿದೆ’ ಎಂದು 2014ರ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ರಾಥೋಡ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next