Advertisement

ನೂತನ ಪೀಠಾಧಿಪತಿ ಪಟ್ಟಾಧಿಕಾರ

10:55 AM Jul 03, 2020 | Suhan S |

ಹುಬ್ಬಳ್ಳಿ: ಭಕ್ತರಲ್ಲಿ ಭಕ್ತಿ ಹಾಗೂ ಸ್ವಾಮೀಜಿಗಳಲ್ಲಿ ಆಧ್ಯಾತ್ಮ ಶಕ್ತಿ ಇದ್ದರೆ ಸ್ವಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದು ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

Advertisement

ರಾಯನಾಳನ ವಿರಕ್ತಮಠದ 8ನೇ ಪೀಠಾಧಿಪತಿಗಳ ನಿರಂಜನ ಚರ ಪಟ್ಟಾಧಿಕಾರ ಮಹೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನೂತನ ಪೀಠಾಧಿಪತಿಗಳು ಸಮಾಜದ ಏಳ್ಗೆಗೆ ಶ್ರಮಿಸಲಿದ್ದಾರೆ ಎಂದರು.

ಮುಂಡರಗಿ ಅನ್ನದಾನೇಶ್ವರ ಸಂಸ್ಥಾನಮಠದ ಜಗದ್ಗುರು ನಾಡೋಜ ಡಾ| ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ಷಟಸ್ಥಲ ಮಾರ್ಗದ ಮೂಲಕ ಶಿವಯೋಗ ಮಾಡಿ ಲಿಂಗಾಂಗ ಸಾಮರಸ್ಯ ಮಾಡಿದರೆ ಮಾನವನು ಮಹಾತ್ಮನಾಗಬಹುದು ಎಂದರು.

ರಾಯನಾಳ ವಿರಕ್ತಮಠದ ನೂತನ ಶ್ರೀ ಅಭಿನವ ರೇವಣಸಿದ್ದ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಮಹಾಂತ ಶಿವಯೋಗಿ ಸ್ವಾಮೀಜಿ, ಶ್ರೀ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next