Advertisement

ದೇಶದ ಭದ್ರತೆ ಸುತ್ತ ಹೊಸಬರ ಚಿತ್ರ “ಆಪರೇಶನ್‌ 72”

04:10 PM Jan 13, 2022 | Team Udayavani |

ಚಿತ್ರರಂಗಕ್ಕೆ ದಿನದಿಂದ ದಿನಕ್ಕೆ ಹೊಸ ಪ್ರತಿಭೆಗಳು ಬರುತ್ತಲೇ ಇರುತ್ತಾರೆ. ಈ ಮೂಲಕ ಹೊಸದನ್ನು ಪ್ರಯತ್ನಿಸುತ್ತಾರೆ. ಈಗ ಈ ಸಾಲಿಗೆ “ಆಪರೇಶನ್‌ 72′ ಎಂಬ ಚಿತ್ರವೊಂದು ಸದ್ದಿಲ್ಲದೇ ಸೆಟ್ಟೇರಿದೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಮತ್ತು ನಿರ್ಮಾಣದ ಜೊತೆಗೆ ಗೋಪಿನಾಥ್‌ ಶಿವಗಿರಿ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸತ್ಯ ಮೇವ ಜಯತೆ ಎಂಬ ಟ್ಯಾಗ್‌ಲೈನ್‌ ಇದೆ.

Advertisement

ಸಿನಿಮಾ ಕುರಿತು ಹೇಳುವುದಾದರೆ ನೆರೆಯ ದೇಶಗಳು ಗಡಿಭಾಗದಲ್ಲಿ ನಿರಂತರವಾಗಿ ಒತ್ತಡ ಹೇರುತ್ತಿರುವ ದೇಶದ ಪ್ರಸ್ತುತ ಪರಿಸ್ಥಿತಿಯನ್ನು ತೋರಿಸಲಿದೆಯಂತೆ. ಜೈವಿಕ ಅಸ್ತ್ರಗಳ ಬಳಕೆ ಗಡಿಯಾಚೆಗಿನ ಭಯೋತ್ಪಾದನೆ, ದೆಹಲಿಯಲ್ಲಿ ಬಾಂಬ್‌ಗಳನ್ನು ಅಳವಡಿಸುವುದು. ಭಯೋತ್ಪಾದಕರಿಂದ ದೇಶದ ಪ್ರಮುಖ ನದಿಗಳಲ್ಲಿ ರಾಸಾಯನಿಕ ಆಧಾರಿತ ವಿಷವನ್ನು ಬೆರೆಸಿ ಯೋಜನೆ ಕಾರ್ಯಗತಗೊಳಿಸಿ ಭಾರತ ಸರ್ಕಾರವನ್ನು ಅಸ್ಥಿರಗೊಳಿಸುವುದು. ಇದಕ್ಕೆ ವಿರುದ್ಧವಾಗಿ ಸಮರ್ಥ ಪ್ರಧಾನ ಮಂತ್ರಿಗಳು ಸಂದರ್ಭಕ್ಕೆ ತಕ್ಕಂತೆ ಪ್ರತಿದಾಳಿಯನ್ನು ನಡೆಸಿ, ದೇಶದ ಸಾರ್ವಭೌಮತ್ವವನ್ನು ರಕ್ಷಿಸುತ್ತಾರೆ ಎಂಬ ಅಂಶ ಪ್ರಮುಖವಾಗಿದೆ.

ಇದನ್ನೂ ಓದಿ:ಸುನಿ ಮತ್ತೊಂದು ಸಿಂಪಲ್‌ ಲವ್‌ ಸ್ಟೋರಿ ರೆಡಿ?

ಚಿತ್ರಕ್ಕೆ ಆರೋನ್‌ ವೆಂಕಟೇಶ್‌ ಕಾರ್ತಿಕ್‌ ಸಂಗೀತ, ನರೇಹಳ್ಳಿ ರಾಮು ಛಾಯಾಗ್ರಹಣ, ಪ್ರವೀಣ್ -ನಾಗರಾಜ.ಡಿ.ಹೊಳ್ಳ ಸಂಕಲನವಿದೆ. ಬೆಂಗಳೂರು, ತಲಕಾಡು, ರಾಮನಗರ, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next