Advertisement

ಸೇನಾ ಮುಖ್ಯಸ್ಥರ ವಿರುದ್ಧ ಪಾಕ್‌ ಟೀಕೆ

10:01 AM Jan 04, 2020 | Team Udayavani |

ಇಸ್ಲಾಮಾಬಾದ್‌: ಪಾಕಿಸ್ಥಾನವು ಉಗ್ರವಾದಕ್ಕೆ ಬೆಂಬಲ ನೀಡುವುದನ್ನು ನಿಲ್ಲಿಸದಿದ್ದರೆ, ಭಾರತ-ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಇರುವ ಉಗ್ರರ ಅಡಗುದಾಣಗಳ ಮೇಲೆ ಯಾವುದೇ ಮುಲಾಜಿಲ್ಲದೆ ದಾಳಿ ನಡೆಸುವ ಹಕ್ಕನ್ನು ಭಾರತ ಹೊಂದಿರುತ್ತದೆ ಎಂದು ಭೂಸೇನೆಯ ನೂತನ ಮುಖ್ಯಸ್ಥ ನಾರಾವಣೆ ನೀಡಿರುವ ಹೇಳಿಕೆಗೆ ಪಾಕಿಸ್ಥಾನ ಪ್ರತಿಕ್ರಿಯಿಸಿದೆ.

Advertisement

‘ಭಾರತೀಯ ಭೂ ಸೇನಾ ಮುಖ್ಯಸ್ಥರ ಹೇಳಿಕೆ ಬೇಜವಾಬ್ದಾರಿತನದಿಂದ ಕೂಡಿದೆ. ಭಾರತವು ಬಾಲಕೋಟ್‌ ಮೇಲೆ ದಾಳಿ ಮಾಡಿದಾಗ ಪಾಕಿಸ್ಥಾನ ದಿಟ್ಟ ಉತ್ತರ ನೀಡಿದ್ದನ್ನು ಯಾರೂ ಮರೆಯುವಂತಿಲ್ಲ. ಹಾಗಿರುವಾಗ ಪಾಕ್‌ ವಿರುದ್ಧ ಇಲ್ಲದ ಹೇಳಿಕೆ ನೀಡುವುದು, ನಮ್ಮ ನೆಲದ ಮೇಲೆ (ಪಿಒಕೆ) ದಾಳಿ ನಡೆಸುವ ಯೋಜನೆ ರೂಪಿಸುವುದು ಮಾಡಿದರೆ ಅದಕ್ಕೆ ತಕ್ಕ ಉತ್ತರ ನೀಡಲು ಪಾಕಿಸ್ಥಾನ ಸಿದ್ಧ” ಎಂದು ಪಾಕ್‌ ವಿದೇಶಾಂಗ ಇಲಾಖೆ ಹೇಳಿದೆ. ಇದೇ ವೇಳೆ, ಗುರುವಾರ ಪೂಂಛ್ ನಲ್ಲಿ ಪಾಕ್‌ ಸೇನೆ ಶೆಲ್‌ ದಾಳಿ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next