Advertisement

ಕೋವಿಡ್‌: ರಾಜ್ಯದಲ್ಲಿ ಮರಣ ಪ್ರಮಾಣ ಏರಿಕೆ

09:22 PM Aug 11, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಗುರುವಾರ 1691 ಹೊಸ ಪ್ರಕರಣಗಳು ವರದಿಯಾಗಿದ್ದು, ಅನಾರೋಗ್ಯದಿಂದ ಬಳಲುತ್ತಿದ್ದ ಆರು ಮಂದಿ ಕೋವಿಡ್‌ ಸೋಂಕಿತರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣ 10,000 ಗಡಿ ದಾಟಿದೆ.

Advertisement

ಗುರುವಾರ 27,000 ಮಂದಿ ಮಾದರಿಯನ್ನು ಪರೀಕ್ಷೆ ಒಳಪಡಿಸಿದ್ದು, ಅವರಲ್ಲಿ ಶೇ.6.9 ಮಂದಿ ಸೋಂಕು ವರದಿಯಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಬೆಂಗಳೂರು ಗ್ರಾಮಾಂತರ, ವಿಜಯಪುರ, ಬಳ್ಳಾರಿ, ಧಾರವಾಡ, ಬೆಳಗಾವಿ, ಕೊಪ್ಪಳ ಮೂಲದ ತಲಾ ಒಬ್ಬರು ಮೃತಪಟ್ಟಿದ್ದಾರೆ. ಮರಣ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.

ಬೆಂಗಳೂರು ನಗರ 1225, ಮೈಸೂರು 88, ಬಳ್ಳಾರಿ 58, ಧಾರವಾಡ 42, ಬೆಳಗಾವಿ 29, ಚಾಮರಾಜನಗರ 27, ಮಂಡ್ಯ 24, ಶಿವಮೊಗ್ಗ 22, ಚಿಕ್ಕಮಗಳೂರು, ದಾವಣಗೆರೆ 19, ಕಲಬುರಗಿ 15, ಹಾಸನ 14, ಚಿಕ್ಕಬಳ್ಳಾಪುರ 12, ಬೆಂಗಳೂರು ಗ್ರಾಮಾಂತರ 11, ಹಾವೇರಿ 10, ರಾಯಚೂರು 9,ಉಡುಪಿ 8, ಕೊಡಗು, ತುಮಕೂರು ,ಉತ್ತರಕನ್ನಡ, ಕೋಲಾರ 7, ಬಾಗಲಕೋಟೆ, ದಕ್ಷಿಣಕನ್ನಡ 6, ರಾಮನಗರ 5, ಚಿತ್ರದುರ್ಗ 4, ವಿಜಯಪುರ, ಕೊಪ್ಪಳ 3, ಗದಗ, ಬೀದರ್‌ ಜಿಲ್ಲೆಯಲ್ಲಿ ಎರಡು ಪಾಸಿಟಿವ್‌ ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next