Advertisement

ಹಂಪನಕಟ್ಟೆ ಸರಕಾರಿ ಪ.ಪೂ. ಕಾಲೇಜಿಗೆ ಬರಲಿದೆ ಸುಸಜ್ಜಿತ ಕಟ್ಟಡ 

08:26 PM Aug 26, 2021 | Team Udayavani |

ಮಹಾನಗರ: ಹಂಪನ ಕಟ್ಟೆಗೆ ಮೂರು ವರ್ಷಗಳ ಹಿಂದೆ ಸ್ಥಳಾಂತರಗೊಂಡಿದ್ದ ಬೊಕ್ಕಪಟ್ಣ ಸರಕಾರಿ ಪದವಿಪೂರ್ವ ಕಾಲೇಜಿಗೆ ನೂತನ ಸುಸಜ್ಜಿತ ಕಟ್ಟಡದ ಕನಸು ಸಾಕಾರಗೊಳ್ಳುತ್ತಿದ್ದು ಕಟ್ಟಡ ನಿರ್ಮಾಣಕ್ಕೆ ಪ್ರಥಮಹಂತದಲ್ಲಿ 1.02 ಕೋ.ರೂ. ಬಿಡುಗಡೆಯಾಗಿದೆ.

Advertisement

ಪ.ಪೂ. ಕಾಲೇಜಿಗೆ 4.80 ಕೋ.ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಯೋಜನೆಯನ್ನು ರೂಪಿಸಿ ಸರಕಾರದ ಆಡಳಿ ತಾತ್ಮಕ ಅನುಮೋದನೆಗೆ ಕಳುಹಿಸಲಾಗಿತ್ತು. ಇದರಲ್ಲಿ ಪ್ರಥಮ ಹಂತವಾಗಿ 1.02 ಕೋ.ರೂ. ಬಿಡುಗಡೆ ಯಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಪ್ರಕ್ರಿಯೆಗಳನ್ನು ಶೀಘ್ರ ಪೂರ್ಣಗೊಳಿಸಿ ಶಿಲಾನ್ಯಾಸಕ್ಕೆ ನಿರ್ಧರಿಸಲಾಗಿದೆ.

ಕಾಲೇಜು ಬೊಕ್ಕಪಟ್ಣದಿಂದ ಅಭ್ಯಾಸಿ ಪ್ರೌಢಶಾಲಾ ಆವರಣಕ್ಕೆ ಸ್ಥಳಾಂತರಗೊಂಡ ಬಳಿಕ ತರಗತಿ ಕೊಠಡಿಗಳ ಸಮಸ್ಯೆ ಎದುರಾಗಿತ್ತು. ಜತೆಗೆ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ವರ್ಷದಿಂದ ವರ್ಷಕ್ಕೆ ಏರಿಕೆಯಾಗತೊಡಗಿತ್ತು. ಇದಲ್ಲದೆ ಕಾಲೇಜಿಗೆ ಸುಸಜ್ಜಿತ ಕಟ್ಟಡ ಕೊರತೆ ಹಿನ್ನೆಲೆ ಯಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಅಳವಡಿಸಿ ಉನ್ನತೀಕರಣಕ್ಕೆ ಸಮಸ್ಯೆ ಯಾಗಿತ್ತು. ಹಾಗಾಗಿ ಶಾಸಕ ವೇದವ್ಯಾಸ ಕಾಮತ್‌ ಅವರು ಕಾಲೇಜಿಗೆ ನೂತನ ಕಟ್ಟಡ ಮಂಜೂರು ಮಾಡುವಂತೆ ಆಗ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರಾಗಿದ್ದ ಸುರೇಶ್‌ ಕುಮಾರ್‌ ಅವರಿಗೆ ಮನವಿ ಸಲ್ಲಿಸಿ ಶೀಘ್ರ ಮಂಜೂರುಗೊಳಿಸುವಂತೆ ಆಗ್ರಹಿಸಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು ಕಾಲೇಜಿಗೆ 4.80 ಕೋ.ರೂ.ವೆಚ್ಚದ ನೂತನ ಕಟ್ಟಡ ಮಂಜೂರುಗೊಳಿಸಿದ್ದರು.

ಕಲಾ, ವಾಣಿಜ್ಯ ತರಗತಿಗಳನ್ನು ಒಳಗೊಂಡಿದ್ದ ಸರಕಾರಿ ಪ.ಪೂ. ಕಾಲೇಜು ಸರಕಾರಿ ಅಭ್ಯಾಸಿ ಪ್ರೌಢಶಾಲಾ ಆವರಣಕ್ಕೆ 2018ರಲ್ಲಿ ಸ್ಥಳಾಂತರಗೊಂಡು 19 ವಿದ್ಯಾರ್ಥಿಗಳೊಂದಿಗೆ ಶೈಕ್ಷಣಿಕ ಚುಟವ ಟಿಕೆಗಳನ್ನು ಆರಂಭಿಸಿತ್ತು. ಬಳಿಕ ಸಾರ್ವಜನಿಕ ಕಂಪೆನಿಗಳ ಸಿಎಸ್‌ಆರ್‌ ನಿಧಿಯಿಂದ ಎರಡು ಕೊಠಡಿಗಳನ್ನು ನಿರ್ಮಿಸಲಾಗಿತ್ತು. 2019ರಲ್ಲಿ ವಿದ್ಯಾರ್ಥಿಗಳ ಸಂಖೆಯಲ್ಲಿ ಹೆಚ್ಚಳವಾಗಿ 56, 2020ರಲ್ಲಿ 58 ಆಗಿತ್ತು. ಈ ವರ್ಷ ಈಗಾಗಲೇ 100 ವಿದ್ಯಾರ್ಥಿಗಳ ಪ್ರವೇಶಾತಿ ಪಡೆದಿದ್ದು, ಕೆಲವು ವಿದ್ಯಾರ್ಥಿ ಗಳು ಸೇರ್ಪಡೆಯಾಗುವ ನಿರೀಕ್ಷೆ ಇದೆ.

ಜಿ+2 ಅಂತಸ್ತು:

Advertisement

ನೂತನವಾಗಿ ನಿರ್ಮಾಣಗೊಳ್ಳಲಿರುವ ಕಾಲೇಜು ಕಟ್ಟಡ ನೆಲ ಮತ್ತು 2 ಅಂತಸ್ತು ಗಳನ್ನು ಒಳಗೊಂಡಿದೆ. ನೆಲಅಂತಸ್ತಿನಲ್ಲಿ ಸರಕಾರಿ ಅಭ್ಯಾಸಿ ಪ್ರೌಢಶಾಲೆ ಕಾರ್ಯಾ ಚರಿಸಲಿದ್ದು, ಮೇಲಿನ ಎರಡು ಅಂತಸ್ತು ಕಾಲೇಜು ಕಾರ್ಯಾಚರಿಸಲಿದೆ. ಪ್ರಸ್ತುತ ಇರುವ ಕಲಾ ಮತ್ತು ವಾಣಿಜ್ಯ ತರಗತಿಗಳ ಜತೆಗೆ ಮುಂದಿನ ವರ್ಷಗಳಲ್ಲಿ ವಿಜ್ಞಾನ ತರಗತಿಯನ್ನು ಕೂಡ ಇಲ್ಲಿ ಆರಂಭಿಸಲು ಯೋಜನೆ ರೂಪಿಸಲಾಗಿದೆ. ನೂತನ ಕಟ್ಟಡ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ತರಗತಿಗಳಿಗೆ ಸುಸುಜ್ಜಿತ ಕೊಠಡಿ, ಲ್ಯಾಬ್‌, ಗ್ರಂಥಾಲಯ, ಕಚೇರಿ, ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಕೊಠಡಿಗಳು, ವಾಶ್‌ರೂಂಗಳನ್ನು ಒಳಗೊಳ್ಳಲಿದೆ. ಎರಡನೇ ಅಂತಸ್ತಿನಲ್ಲಿ 1200 ಚದರ ಅಡಿಯ ಸುಸಜ್ಜಿತ ಸಭಾಂಗಣ ಬರಲಿದೆ.

ಹಂಪನಕಟ್ಟೆಯ ಸರಕಾರಿ ಅಭ್ಯಾಸಿ ಪ್ರೌಢಶಾಲೆಯ ಆವರಣದಲ್ಲಿ ಕಾರ್ಯಾಚರಿಸುತ್ತಿರುವ ಬೊಕ್ಕಪಟ್ಣ ಸರಕಾರಿ ಪ.ಪೂ. ಕಾಲೇಜಿಗೆ ಸುಸಜ್ಜಿತ ಕಟ್ಟಡ ನಿರ್ಮಾಣದ ಬಗ್ಗೆ ಹಿಂದಿನ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರಿಗೆ 4.8 ಕೋ.ರೂ. ವೆಚ್ಚದ ಪ್ರಸ್ತಾವನೆಯನ್ನು ಸಲ್ಲಿಸಿದ್ದೆ. ಇದು ಅನುಮೋದನೆಗೊಂಡು ಇದೀಗ 1.02 ಕೋ.ರೂ. ಮಂಜೂರಾಗಿದ್ದು, ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ.  ಕಾಮಗಾರಿಗೆ ಸಂಬಂಧ ಪಟ್ಟ ಪ್ರಕ್ರಿಯೆಗಳನ್ನು ಶೀಘ್ರ ಆರಂಭಿಸಲಾಗುವುದು.-ವೇದವ್ಯಾಸ ಕಾಮತ್‌, ಶಾಸಕರು, ಮಂಗಳೂರು ದಕ್ಷಿಣ

Advertisement

Udayavani is now on Telegram. Click here to join our channel and stay updated with the latest news.

Next