Advertisement

ಪಲ್ಲಕಿ‌ ಹೊರುವವರಿಗೆ ಹಿಂದಾದರೇನು, ಮುಂದಾದರೇನು?:ಈಶ್ವರಪ್ಪ ಪ್ರಶ್ನೆ

01:49 PM Jan 25, 2022 | Team Udayavani |

ಶಿವಮೊಗ್ಗ : ಪಲ್ಲಕಿ ಹೊರುವವರಿಗೆ ಹಿಂದೆ ಆದರೇನು, ಮುಂದೆ ಆದರೇನು ? ಎಂದು‌‌‌ ಜಿಲ್ಲಾ ಉಸ್ತುವಾರಿ ವಿವಾದ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಟ್ವೀಟ್‌ ಮಾಡಿದ್ದಾರೆ.

Advertisement

ಜಿಲ್ಲಾ ಉಸ್ತುವಾರಿ ಸ್ಥಾನದ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೊಂದು ದುರಂತ. ಈ ಬಗ್ಗೆ ವಿವಾದ ಸೃಷ್ಟಿಯಾಗಲೇ ಬಾರದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಆಡಳಿತ ನಡೆಸುವ ಸಚಿವರಿಗೆ ಯಾವ ಜಿಲ್ಲೆ ಆದರೇನು.  ಆ ಜಿಲ್ಲೆ ಬೇಕು ಈ ಜಿಲ್ಲೆ ಬೇಡ ಅಂತಾ ಚರ್ಚೆಯಾಕೆ..?  ಪಲ್ಲಿಕ್ಕಿ ಹೊರವುವವನಿಗೆ ಎಡ ಆದರೇನು ಬಲ ಆದರೇನು..?  ದೇವರ ಕೆಲಸ ಅಂದರೇ ಜನರ ಸೇವೆ ಮಾಡುವುದು ಎಂದು ಅಸಮಾಧಾನಿತರಿಗೆ ಸಚಿವ ಕೆ.ಎಸ್ ಈಶ್ವರಪ್ಪ ಕಿವಿಮಾತು ಹೇಳಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಸಂದರ್ಭದಲ್ಲಿ ಕೆ.ಎಸ್.ಈಶ್ಚರಪ್ಪ ಅವರಿಗೆ ತವರು‌ ಜಿಲ್ಲೆ ಶಿವಮೊಗ್ಗ ಬದಲು ಚಿಕ್ಕಮಗಳೂರು ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next