Advertisement

ನೆರಿಯ: ಒಂಟಿ ಸಲಗ ಓಡಾಟ, ಬಾಳೆ ಗಿಡಗಳಿಗೆ ಹಾನಿ

01:49 AM Dec 04, 2021 | Team Udayavani |

ಬೆಳ್ತಂಗಡಿ: ನೆರಿಯದ ಕಾಟಾಜೆ, ಆಲಂಗಾಯಿಯ ಜನವಸತಿ ಪ್ರದೇಶದಲ್ಲಿ ಗುರುವಾರ ಸಂಜೆ 7ರ ಸುಮಾರಿಗೆ ಒಂಟಿ ಸಲಗ ಸವಾರಿ ನಡೆಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

Advertisement

ಕಾಟಾಜೆ ಕಡೆಯಿಂದ ಬಂದ ಆನೆ ಬಳಿಕ ನೆರಿಯಕಾಡು ಕಡೆಗೆ ಹೋಗಿದೆ. ಸುಮಾರು ಅರ್ಧ ತಾಸು ತಿರುಗಾಟ ನಡೆಸಿದ್ದು, ಆಲಂಗಾಯಿ ರಾಮಕೃಷ್ಣ ಅವರ ತೋಟದ ಬಾಳೆ ಗಿಡಗಳಿಗೆ ಹಾನಿ ಉಂಟು ಮಾಡಿದೆ.

ಕಳೆದ ಕೆಲ ದಿನಗಳ ಹಿಂದೆ ಚಾರ್ಮಾಡಿ, ತೋಟತ್ತಾಡಿ, ಮುಂಡಾಜೆ ಆಸುಪಾಸು ಕಂಡು ಬಂದಿದ್ದ ಆನೆ ಇದೀಗ ನೆರಿಯ ಪ್ರದೇಶಕ್ಕೆ ಲಗ್ಗೆ ಇಟ್ಟಿದೆ.

ಇದನ್ನೂ ಓದಿ:ದಶಕದ ಬೆಳವಣಿಗೆ ಕಂಡ ಸೇವಾ ಕ್ಷೇತ್ರ: ಪಿಎಂಐ

ಬಾಳೆ, ಅಡಿಕೆ ಸಹಿತ ಕೃಷಿ ಚಟುವಟಿಕೆಗಳ ಮೇಲೆ ನಿರಂತರ ದಾಳಿ ಇಡುತ್ತಿದೆ. ಕೃಷಿಕರು ಈಗಾಗಲೇ ಅಕಾಲಿಕ ಮಳೆಯಿಂದ ಅಪಾರ ನಷ್ಟ ಅನುಭವಿಸಿರುವ ನಡುವೆ ಆನೆ ಸಹಿತ ಕಾಡು ಪ್ರಾಣಿಗಳ ಹಾವಳಿಯಿಂದ ವರ್ಷಂಪೂರ್ತಿ ಬೆಳೆ ನಷ್ಟ ಅನುಭವಿಸುವಂತಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next