Advertisement

ನೆಲ್ಯಾಡಿ:ನಾಪತ್ತೆಯಾದ ವ್ಯಕ್ತಿ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿಪತ್ತೆ

01:31 PM Aug 05, 2018 | |

ನೆಲ್ಯಾಡಿ: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವ ಭಾನುವಾರ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ  ನೆಲ್ಯಾಡಿ ಸಮೀಪದ ಕೊಲ್ಪೆ ಎಂಬಲ್ಲಿ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿ ಗೋವಿಂದರಾಜ್ (53) ಎಂದು ಗುರುತಿಸಲಾಗಿದೆ. 

Advertisement

ನಾಪತ್ತೆಯಾಗುವ ಮೊದಲು ಕೋಳಿ ವಿಚಾರದಲ್ಲಿ ನೆರೆ ಮನೆಯವರೊಂದಿಗೆ ಜಗಳವಾಗಿತ್ತು ಎನ್ನಲಾಗುತ್ತಿದೆ. ನಾಪತ್ತೆ  ವಿಚಾರದಲ್ಲಿ ಪೋಲಿಸ್ ಠಾಣೆಯಲ್ಲಿ ಮೌಖಿಕವಾಗಿ ದೂರು ನಿಡಿದ್ದರೂ ಪ್ರಕರಣ ದಾಖಲಾಗಿರಲಿಲ್ಲ. ಈಗ ಶವ ಕೆರೆಯಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನಗಳನ್ನು ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. 
ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next