Advertisement

Kadike trust; ಉಡುಪಿಯ ಸೀರೆ ನೇಕಾರರಿಬ್ಬರಿಗೆ “ನೇಕಾರ ರತ್ನ’ ಪ್ರಶಸ್ತಿ

09:07 PM Aug 06, 2024 | Team Udayavani |

ಮಂಗಳೂರು: ಕೈಮಗ್ಗ ನೇಕಾರರಿಗೆ ಕದಿಕೆ ಟ್ರಸ್ಟ್‌ ವತಿಯಿಂದ ನೀಡಲಾಗುವ ಪ್ರತಿಷ್ಠಿತ “ನೇಕಾರ ರತ್ನ’ ಪ್ರಶಸ್ತಿಗೆ ಹಿರಿಯ ನೇಕಾರರಾದ ಉಡುಪಿಯ ಸಂಜೀವ ಶೆಟ್ಟಿಗಾರ್‌ ಹಾಗೂ ಸೋಮಪ್ಪ ಜತ್ತನ್ನ ಅವರನ್ನು ಆಯ್ಕೆ ಮಾಡಲಾಗಿದೆ.

Advertisement

ಶಿವಳ್ಳಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ 86 ವರ್ಷದ ಸಂಜೀವ ಶೆಟ್ಟಿಗಾರ್‌ ಈಗ ಅಳಿದು ಹೋಗಿರುವ ಮುತ್ತು ಬಾರ್ಡರ್‌ ನೇಯ್ಗೆಯನ್ನು 2019ರ ವರೆಗೂ ನೇಯುತ್ತಿದ್ದರು. ಈಗಲೂ ತಮ್ಮದೇ ವಿನ್ಯಾಸದ ಸೆರಗಿನಲ್ಲಿ ಬುಟ್ಟಾ ಇರುವ 60 ಕೌಂಟ್‌ ಸೀರೆಗಳನ್ನು ನೇಯುವುದರ ಜೊತೆಗೆ ಅನೇಕ ನೇಕಾರರಿಗೆ ಹಾಸು ಮತ್ತು ವಿನ್ಯಾಸ ಮಾಡುವ ಕೆಲಸ ಮಾಡುತ್ತಾ ಸಕ್ರಿಯರಾಗಿದ್ದಾರೆ. 74 ವರ್ಷದಿಂದ ನೇಯ್ಗೆ ಮಾಡುತ್ತಿರುವ ದಾಖಲೆ ಹೊಂದಿದ್ದಾರೆ.

ಸೋಮಪ್ಪ ಜತ್ತನ್ನ ಅವರು ಕಳೆದ 66 ವರುಷಗಳಿಂದ ನೇಕಾರಿಕೆಯ ಕಾಯಕದಲ್ಲಿ ನಿರತರಾಗಿದ್ದಾರೆ. ಅವರು 60 ಕೌಂಟ್‌ ನ ಸಣ್ಣ ಚೌಕುಳಿ ವಿನ್ಯಾಸದ ಅಪೂರ್ವ ಕಟ್‌ ಬಾರ್ಡರ್‌ ಉಡುಪಿ ಸೀರೆಗಳನ್ನು ನೇಯುತ್ತಿದ್ದಾರೆ.

ಈ ಹಿರಿಯ ಕಾಯಕ ಯೋಗಿಗಳು ಪರಿಸರ ಸ್ನೇಹಿ ಉಡುಪಿ ಸೀರೆ ನೇಕಾರಿಕೆಗೆ ನೀಡಿದ ಕೊಡುಗೆಗಾಗಿ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಅಳಿವಿನಂಚಿಗೆ ತಲುಪಿದ್ದ ಉಡುಪಿ ಸೀರೆ ನೇಕಾರಿಕೆ  ಈಗ ಕದಿಕೆ ಟ್ರಸ್ಟ್‌ ನ  ಪ್ರಯತ್ನದಿಂದ ಪುನಃಶ್ಚೇತನಗೊಂಡಿದೆ ಎಂದು ಪ್ರಕಟನೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next