Advertisement

Neha ಹತ್ಯೆ; ಜಾಲತಾಣದಲ್ಲಿ ಪೋಸ್ಟ್ ಮಾಡಿದವ ಪೋಲಿಸರ ವಶಕ್ಕೆ

11:35 PM Apr 20, 2024 | Team Udayavani |

ಧಾರವಾಡ : ನೇಹಾ ಹತ್ಯೆ ಪ್ರಕರಣದ ಕುರಿತು ಇವರ ನಿಜವಾದ ಪ್ರೀತಿಗೆ ನ್ಯಾಯ ಸಿಗಲಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಯುವಕನನ್ನು ಬಜರಂಗ ದಳದ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ.

Advertisement

ಧಾರವಾಡದ ಗೌಳಿಗಲ್ಲಿಯ ಸಾಧಿಕ್ ಎಂಬಾತನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ತಡ ರಾತ್ರಿ ವರೆಗೂ ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆರೋಪಿಯು ತನ್ನ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಫಯಾಜ್ ಜತೆ ನೇಹಾ ಇರುವ ಪೋಟೋದೊಂದಿಗೆ ‘ನೇಹಾ ಹಾಗೂ ಫಯಾಜ್ ನಿಜವಾದ ಪ್ರೀತಿಗೆ ನ್ಯಾಯ ಸಿಗಲಿ’ ಎಂಬುದಾಗಿ ಬರೆದು ಪೋಸ್ಟ್ ಮಾಡಿದ್ದ.

ಈ ಪೋಸ್ಟ್ ಗಮನಿಸಿದ ಬಜರಂಗ ದಳದ ಜಿಲ್ಲಾ ಸಂಯೋಜಕ ಸಿದ್ದಲಿಂಗಯ್ಯ ಹಿರೇಮಠ ಅವರು ಸಾಧಿಕ್ ನನ್ನು ಹಿಡಿದು ತಂದು ವಿದ್ಯಾಗಿರಿ ಪೊಲೀಸರಿಗೆ ಒಪ್ಪಿಸಿದ್ದಾರೆ‌. ಇದಲ್ಲದೇ ಸಾಧಿಕ್ ವಿರುದ್ದ ದೂರು ದಾಖಲಿಸಲು ಮುಂದಾಗಿದ್ದಲ್ಲದೇ ಠಾಣೆ ಎದುರು ಜೈ ಶ್ರೀರಾಮ್ ಘೋಷಣೆ ಮೊಳಗಿಸಿದ್ದಾರೆ. ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next