Advertisement

ನೀನೇ ಸಾಕಿದ ಗಿಣಿ ಮುಕ್ತಾಯ

10:45 AM Nov 21, 2017 | |

ಹೊಸಬರೇ ಸೇರಿ ಮಾಡಿದ “ನೀನೇ ಸಾಕಿದ ಗಿಣಿ’ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಮುಗಿದಿದೆ. ಎ.ಎಸ್‌.ಕೆ. ಡ್ರೀಮ್ಸ್‌ ಬ್ಯಾನರ್‌ನಲ್ಲಿ ಕುಮಾರ್‌ ನಿರ್ಮಾಣದ ಈ ಚಿತ್ರದ ಚಿತ್ರೀಕರಣ ಕೋಲಾರದ ಸುತ್ತಮುತ್ತ ನಡೆದಿದೆ. ಚಿತ್ರದಲ್ಲಿರುವ 4 ಹಾಡುಗಳನ್ನು ಅರುಣ್‌ರಾಮ್‌ ರಚಿಸಿದ್ದಾರೆ.

Advertisement

ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು ಲವ್‌ಸ್ಟೋರಿ. ಅದರಲ್ಲೂ ಗೆಳೆತನ, ಸೆಂಟಿಮೆಂಟ್‌, ಆ್ಯಕ್ಷನ್‌ ಗೆ ಇಲ್ಲಿ ಒತ್ತು ನೀಡಲಾಗಿದೆ. ಸೂರ್ಯಕಾಂತ್‌ (ಎಸ್‌. ಮಂಜು) ಈ ಚಿತ್ರದ ನಿರ್ದೇಶಕರು. ಚಿತ್ರಕ್ಕೆ ದೇವು ಕ್ಯಾಮೆರಾ ಹಿಡಿದರೆ, ಅರುಣ್‌ ರಾಮ್‌ ಅವರ ಸಂಗೀತವಿದೆ.

ಕುಂಫ‌ು ಚಂದ್ರು ಸಾಹಸವಿದೆ. ಮುತ್ತುರಾಜ್‌ ಸಂಕಲನವಿದೆ. ಮುರುಗೇಶ್‌ ನೃತ್ಯ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಬಿ.ಎಸ್‌.ಕುಮಾರ್‌, ಸೂರ್ಯಕಾಂತ್‌, ನಯನ, ಅಮೃತ, ಸನ್ನಿಧಿ, ರೇಮಂಜಯ್ಯ, ಅರುಣ್‌ ರಾಮ್‌, ಯೋಗರಾಮ್‌, ಪ್ರೇಮ, ಮುಂತಾದವರು ನಟಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next