Advertisement
ಪುತ್ತೂರು – ಉಪ್ಪಿನಂಗಡಿ ರಸ್ತೆಯ ಹಾರಾಡಿಯಿಂದ ಒಂದಷ್ಟು ಭಾಗ ಚತುಷ್ಪಥಗೊಂಡಿದೆ. ಆದರೆ ಬೊಳು ವಾರು ಜಂಕ್ಷನ್ನಿಂದ ಹಾರಾಡಿ ತನಕ ಅಭಿವೃದ್ಧಿಗೊಳಿಸುವ ಅನಿವಾರ್ಯತೆ ಇದ್ದರೂ ರೈಲ್ವೇ ಮೇಲ್ಸೇ ತುವೆ ಅಭಿವೃದ್ಧಿ, ರಸ್ತೆ ಅಗಲ ಗೊಳಿಸಲು ಭೂ ಸ್ವಾಧೀನ ಆಗಬೇಕಿದೆ.
ಬೊಳುವಾರು – ಹಾರಾಡಿ ಭಾಗವನ್ನು ಚತುಷ್ಪಥಗೊಳಿಸಲು ರೈಲ್ವೇ ಇಲಾಖೆಯ ಸೇತುವೆಯ ಅಗಲಗೊಳಿಸಲು ನಕಾಶೆ ತಯಾರಿಸಿಕೊಡುವಂತೆ ಲೋಕೋಪಯೋಗಿ ಇಲಾಖೆಯಿಂದ
ಪುತ್ತೂರು ರೈಲ್ವೇ ಸೀನಿಯರ್ ಸೆಕ್ಷನ್ ಎಂಜಿನಿಯರ್ಗೆ 2016ರ ಅ. 21ರಂದು ಪತ್ರ ರವಾನೆಯಾಗಿದೆ. ಆದರೆ ಈ ಕುರಿತು ರೈಲ್ವೇ ಅಧಿಕಾರಿಗಳು ಯಾವುದೇ ಸ್ಪಂದನೆ ನೀಡಿಲ್ಲ. ಅಲ್ಲದೆ ರಸ್ತೆ ಅಗಲಗೊಳಿಸಲು ಈ ಭಾಗದಲ್ಲಿ ಭೂ ಸ್ವಾಧೀನಕ್ಕೆ ಸಂಬಂಧಿಸಿ ಪಕ್ಷಿನೋಟದ ನಕಾಶೆ ತಯಾರಿಸಿ ಸಲ್ಲಿಸಲು ಲೋಕೋಪಯೋಗಿ . ಇಲಾಖೆ 2015ರ ಜೂ. 6ರಂದು ತಹಶೀಲ್ದಾರ್ಗೆ ಪತ್ರ ರವಾನಿಸಿದೆ. ತಹಶೀಲ್ದಾರ್ ಅವರಿಂದಲೂ ಸ್ಪಂದನೆ ಬಂದಿಲ್ಲ ಎಂಬ ಮಾಹಿತಿ ಲಭಿಸಿದೆ. ಅನುದಾನ ಬೇಕು
ಪುತ್ತೂರು ಉಪ್ಪಿನಂಗಡಿ ಮೂಲಕ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸಲು ಹಾಗೂ ನೆಲ್ಯಾಡಿ, ಧರ್ಮಸ್ಥಳ ಕಡೆಯ ಸಂಪರ್ಕ ಸುಲಭವಾಗುವ ನಿಟ್ಟಿನಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುವ ಬೊಳುವಾರು -ಹಾರಾಡಿ ರಸ್ತೆ ಅಭಿವೃದ್ಧಿಯೂ ಆಗಬೇಕಿದೆ. ಈ ನಿಟ್ಟಿನಲ್ಲಿ ರೈಲ್ವೇ ಸೇತುವೆ ಅಭಿವೃದ್ಧಿಗೆ ಅಂದಾಜು 6 ಕೋಟಿ ರೂ. ಹಾಗೂ ಭೂ ಸ್ವಾಧೀನಕ್ಕೂ ಕೋಟಿ ಲೆಕ್ಕದಲ್ಲಿ ಅನುದಾನ ಬೇಕಾಗಿದೆ. ಅದಕ್ಕಾಗಿ ಜನಪ್ರತಿನಿಧಿಗಳ ಜತೆಗೆ ವಿವಿಧ ಇಲಾಖೆಗಳ ಅಧಿಕಾರಿಗಳೂ ಇಚ್ಛಾಶಕ್ತಿ ತೋರಬೇಕಾಗಿದೆ.
Related Articles
Advertisement
ಶಾಸಕರಿಗೆ ಪ್ರಸ್ತಾವನೆಐದು ವರ್ಷದ ಮೊದಲು ಈ ರಸ್ತೆಯನ್ನು ಚತುಷ್ಪಥಗೊಳಿಸಲು 8 ಕೋಟಿ ರೂ. ಅನುದಾನವನ್ನು ಇಲಾಖೆಯ ಮೂಲಕ ಕೇಳಲಾಗಿತ್ತು. 2015ರಲ್ಲಿ 1.50 ಕೋಟಿ ರೂ. ಅನುದಾನವೂ ಲಭಿಸಿತ್ತು. ಆದರೆ ರಸ್ತೆ ಅಗಲಗೊಳಿಸಲು ಭೂಮಿ ಸ್ವಾಧೀನ ಸೇರಿದಂತೆ ಇತರ ಕೆಲಸಗಳಿಗೆ ಆ ಅನುದಾನ ಕಡಿಮೆಯಾಗಿದ್ದರಿಂದ ಡಾಮರು ಕಾಮಗಾರಿ ಮಾತ್ರ ಮಾಡಲಾಗಿತ್ತು. 2020ಕ್ಕೆ ಮುಂದಿನ ಅಭಿವೃದ್ಧಿ ಸಾಧ್ಯವಾಗುವುದರಿಂದ ಶಾಸಕರೂ ಪ್ರಸ್ತಾವನೆ ತೆಗೆದುಕೊಂಡಿದ್ದಾರೆ.
– ಪ್ರಮೋದ್ ಕುಮಾರ್
ಸಹಾಯಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಸಮನ್ವಯ ಸಭೆ ನಡೆಯಲಿ
ಅತಿ ಅಗತ್ಯವಾದ ರಸ್ತೆಯ ಚತುಷ್ಪಥ ಅಭಿವೃದ್ಧಿಗಾಗಿ ಶಾಸಕರು ಹಾಗೂ ಸಂಸದರ ನೇತೃತ್ವದಲ್ಲಿ ಇಲಾಖೆಗಳ ಸಮನ್ವಯದ ಸಭೆಯನ್ನು ನಡೆಸುವಂತೆ ಮನವಿ ಮಾಡಿದ್ದೇವೆ. ಉಪ್ಪಿನಂಗಡಿ ರಸ್ತೆಯ ಉಳಿಕೆ ಭಾಗ ಚತುಷ್ಪಥ ಅಭಿವೃದ್ಧಿಯಾಗುತ್ತಿರುವ ಸಂದರ್ಭದಲ್ಲಿ ಈ ಭಾಗವನ್ನೂ ಪರಿಗಣಿಸಬೇಕೆಂಬುದು ನಮ್ಮ ಬೇಡಿಕೆ.
– ರಾಧೇಶ ವಿಟ್ಟಪ್ಪ ಪ್ರಭು , ಬೊಳುವಾರು ರಾಜೇಶ್ ಪಟ್ಟೆ