Advertisement

Manipur ಸಿಎಂ ಬಿರೇನ್‌ ಸಿಂಗ್‌ ನಿವಾಸದ ಬಳಿ ಬೆಂಕಿ ಆಕಸ್ಮಿಕ

01:00 AM Jun 16, 2024 | Team Udayavani |

ಇಂಫಾಲ: ಮಣಿಪುರ ಸಿಎಂ ಎನ್‌.ಬಿರೇನ್‌ ಸಿಂಗ್‌ ನಿವಾಸಕ್ಕೆ ಸಮೀಪದಲ್ಲಿರುವ ಪಾಳುಬಿದ್ದ ಬಂಗಲೆಯಲ್ಲಿ ಶನಿವಾರ ಭಾರೀ ಬೆಂಕಿ ಅವಘಡ ಸಂಭವಿಸಿದೆ. ಸಿಎಂ ನಿವಾಸಕ್ಕೆ ಹೊಂದಿಕೊಂಡಿರುವ ಕಾರ್ಯಾಲಯ ಸಂಕೀರ್ಣದ ಸಮೀ ಪವೇ ಐಎಎಸ್‌ ಅಧಿಕಾರಿಯೊಬ್ಬರ ಕುಟುಂಬಕ್ಕೆ ಸಂಬಂಧಿಸಿದ ಪಾಳು ಬಂಗಲೆ ಇದೆ. ಜನಾಂಗೀಯ ಸಂಘರ್ಷವಾದಾಗಿನಿಂದ ಈ ಬಂಗಲೆ ಪಾಳು ಬಿದ್ದಿದೆ.

Advertisement

ಅಗ್ನಿಶಾಮಕ ದಳ ಸಿಬಂದಿ ಆಗಮಿಸಿ ಬೆಂಕಿಯನ್ನು ಶಮನಗೊಳಿಸಿದರು. ಮಣಿಪುರದಲ್ಲಿ ಹಿಂಸಾತ್ಮಕ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಇಂಫಾಲದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next