Advertisement

ಕಂಚು ಗೆದ್ದರೂ ಕ್ಷಮೆಯಾಚಿಸಿದ ಪೂಜಾಗೆ ಪ್ರಧಾನಿ ಮೋದಿ ಸಾಂತ್ವನ

10:00 PM Aug 07, 2022 | Team Udayavani |

ಹೊಸದಿಲ್ಲಿ: ಭಾರತೀಯ ಕ್ರೀಡಾಪಟುಗಳನ್ನು ಉತ್ತೇಜಿಸುವುದರಲ್ಲಿ ಅತೀ ಹೆಚ್ಚು ಆಸಕ್ತಿವಹಿಸಿದ ಮೊದಲ ಪ್ರಧಾನಿ ನರೇಂದ್ರ ಮೋದಿ ಎಂದರೆ ತಪ್ಪಾಗುವುದಿಲ್ಲ. ಸ್ಪರ್ಧಿಗಳು ತರಬೇತಿ ನಡೆಸಲು ಆರ್ಥಿಕ ನೆರವು ನೀಡುವುದು, ಹೊರಡುವ ಮುಂಚೆ ಒಮ್ಮೆ ಎಲ್ಲರೊಂದಿಗೆ ಸಂವಾದ ಮಾಡುವುದು, ಕೂಟ ಮುಗಿದ ಮೇಲೆ ಮತ್ತೂಮ್ಮೆ ಸಂವಾದ ಮಾಡುವುದನ್ನು ಮೋದಿ ಮಾಡುತ್ತಲೇ ಬಂದಿದ್ದಾರೆ. ಈ ಬಾರಿ ಕಾಮನ್‌ವೆಲ್ತ್‌ನಲ್ಲಿ ಅವರು ದುಃಖತಪ್ತ ಸ್ಪರ್ಧಿಗೆ ಸಾಂತ್ವನ ಹೇಳಿಯೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಶನಿವಾರ ಪೂಜಾ ಗೆಹ್ಲೋ ಟ್ 50 ಕೆ.ಜಿ. ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದರು. ಚಿನ್ನ ತಪ್ಪಿಸಿಕೊಂಡ ಬೇಸರದಲ್ಲಿ ಅವರು ಕ್ಷಮೆ ಕೇಳಿದರು.

Advertisement

“ನಾನಿಲ್ಲಿ ರಾಷ್ಟ್ರಗೀತೆ ಕೇಳಿಸಬೇಕೆಂಬ ಆಸೆಯಿಟ್ಟುಕೊಂಡಿದ್ದೆ. ಅದು ಸಾಧ್ಯವಾಗಲಿಲ್ಲ. ನನ್ನ ಸಹ ಆಟಗಾರರಲ್ಲಿ ಕ್ಷಮೆ ಕೇಳುತ್ತೇನೆ. ತಪ್ಪುಗಳಿಂದ ಕಲಿಯುತ್ತೇನೆ’ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಮೋದಿ, ಪೂಜಾ ನಿಮ್ಮ ಪದಕ ಸಂಭ್ರಮಾಚರಣೆಯನ್ನು ಕೇಳುತ್ತಿದೆ, ಕ್ಷಮೆಯನ್ನಲ್ಲ.ನಿಮ್ಮ ಜೀವನ ನಮಗೆ ಸ್ಫೂರ್ತಿ, ನಿಮ್ಮ ಯಶಸ್ಸು ನಮಗೆ ಆನಂದ ನೀಡಿದೆ. ಮಹತ್ತಾದುದನ್ನು ಸಾಧಿಸಲು ನೀವು ಸಜ್ಜಾಗಿದ್ದೀರಿ, ಹೀಗೆಯೇ ಮಿಂಚುತ್ತ ಇರಿ ಎಂದಿದ್ದಾರೆ. ಅವರ ಈ ಸಾಂತ್ವನದ ಟ್ವೀಟ್‌ ಭಾರತೀಯ ಕ್ರೀಡಾವಲಯದಲ್ಲಿ ಸಂಚಲನ ಉಂಟು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next