Advertisement

By Polls; ಕಳೆಗಟ್ಟಿದ ಚನ್ನಪಟ್ಟಣ; ಉಪಚುನಾವಣೆ ಅಭ್ಯರ್ಥಿ ಅಂತಿಮಗೊಳಿಸಿದ ಜೆಡಿಎಸ್

04:39 PM Oct 24, 2024 | Team Udayavani |

ಬೆಂಗಳೂರು: ರಾಜ್ಯದ ಕುತೂಹಲ ಕೆರಳಿಸಿರುವ ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಗೆ ಎನ್‌ ಡಿಎ ಅಭ್ಯರ್ಥಿ (NDA) ಪ್ರಕಟವಾಗಿದೆ. ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಅವರು ಎನ್‌ ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

Advertisement

ಮಂಗಳವಾರ (ಅ.24) ಬೆಂಗಳೂರಿನ ಜೆಡಿಎಸ್‌ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರ ಹೆಸರು ಅಂತಿಮ ಮಾಡಲಾಯಿತು. ಬಳಿಕ ಬಿ ಎಸ್‌ ಯಡಿಯೂರಪ್ಪ ಮತ್ತು ಎಚ್‌ ಡಿ ಕುಮಾರಸ್ವಾಮಿ ಅವರಿ ಜಂಟಿಯಾಗಿ ನಿಖಿಲ್‌ ಹೆಸರನ್ನು ಘೋಷಣೆ ಮಾಡಿದರು.

ಒತ್ತಡಕ್ಕೆ ಮಣಿದು ಸ್ಪರ್ಧೆಗೆ ಒಪ್ಪಿದ್ದೇನೆ. ಚನ್ನಪಟ್ಟಣದಲ್ಲಿ ನಾನು ಸ್ಪರ್ಧೆಗೆ ಸಿದ್ದ. ಚುನಾವಣೆ ಒಬ್ಬ ವ್ಯಕ್ತಿಗೋಸ್ಕರ ಅಲ್ಲ ಎನ್‌ ಡಿಎ ಮೈತ್ರಿಗೋಸ್ಕರ ಎಂದು ಈ ವೇಳೆ ನಿಖಿಲ್‌ ಹೇಳಿದರು.

“ನಿಖಿಲ್‌ ನಿಮ್ಮ ಮಗ, ಅವನನ್ನು ಈ ಬಾರಿ ಗೆಲ್ಲಿಸುವ ಜವಾಬ್ದಾರಿ ನಿಮ್ಮದು. ನಿಖಿಲ್‌ ನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ” ಎಂದು ಎಚ್‌ ಡಿ ಕುಮಾರಸ್ವಾಮಿ ಹೇಳಿದರು.

Advertisement

ಎನ್‌ ಡಿಎ ಟಿಕೆಟ್‌ ಬಯಸಿದ್ದ ಸಿಪಿ ಯೋಗೇಶ್ವರ್‌ ಅವರು ಟಿಕೆಟ್‌ ಸಿಗದ ಕಾರಣ ಕಾಂಗ್ರೆಸ್‌ ಸೇರಿ ಅಲ್ಲಿಂದ ಸ್ಪರ್ಧಿಸುತ್ತಿದ್ದಾರೆ. ಜೆಡಿಎಸ್‌ ನಿಂದ ಹಲವರು ಹೆಸರು ಕೇಳಿಬಂದಿತ್ತು. ಸಂಸದ ಡಾ ಸಿಎನ್‌ ಮಂಜುನಾಥ್‌ ಪತ್ನಿ ಅನುಸೂಯಾ, ಜಯಮುತ್ತು ಹೆಸರುಗಳು ಮುಂಚೂಣಿಯಲ್ಲಿದ್ದವು. ಇದೀಗ ನಿಖಿಲ್‌ ಹೆಸರು ಅಂತಿಮವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next