Advertisement

NCP; ಕುಟುಂಬ ಒಡೆಯುವವರನ್ನು ಜನರು ಒಪ್ಪಲ್ಲ,ತಪ್ಪಿನ ಅರಿವಾಗಿದೆ: ಅಜಿತ್‌ ಪವಾರ್‌

01:00 AM Sep 09, 2024 | Team Udayavani |

ಮುಂಬಯಿ: “ಯಾರು ಕುಟುಂಬವನ್ನು ಒಡೆಯು ತ್ತಾರೋ ಅವರಿಗೆ ಜನರು ಮನ್ನಣೆ ನೀಡುವುದಿಲ್ಲ. ನನಗೂ ಈ ತಪ್ಪಿನ ಅರಿವಾಗಿದೆ’ ಎಂದು ಮಹಾರಾಷ್ಟ್ರದ ಡಿಸಿಎಂ ಹಾಗೂ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಹೇಳಿದ್ದಾರೆ.

Advertisement

ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಪಕ್ಷದ ಕಾರ್ಯಕ್ರಮದಲ್ಲಿ ಸಚಿವ ಧರ್ಮರಾವ್‌ ಬಾಬಾ ಆತ್ರಮ್‌ ಮತ್ತು ಅವರ ಪುತ್ರಿ ಭಾಗ್ಯಶ್ರೀ ನಡುವಿನ ಮನಸ್ತಾಪ ಕುರಿತು ಮಾತನಾಡುವಾಗ ಅವರು ಈ ವಿಷಯ ಹೇಳಿದರು. ಅಲ್ಲದೇ ತಂದೆಯ ವಿರುದ್ಧ ಕಣಕ್ಕಿಳಿಯಲು ಮುಂದಾಗಿರುವ ಭಾಗ್ಯಶ್ರೀಗೆ ಪಕ್ಷ ಬಿಟ್ಟು ಹೋಗದಂತೆ ಹೇಳಿದರು.

ದಯವಿಟ್ಟು ಕುಟುಂಬವನ್ನು ಒಡೆಯಬೇಡಿ. ಕುಟುಂಬ ಒಡೆಯುವರನ್ನು ಜನರು ಒಪ್ಪಿಕೊಳ್ಳುವುದಿಲ್ಲ. ನನಗೆ ಇದರ ಅನುಭ ವವಾಗಿದೆ ಮತ್ತು ನನ್ನಿಂದಾದ ತಪ್ಪನ್ನು ಒಪ್ಪಿಕೊಳ್ಳುತ್ತೇನೆ ಎಂದರು. ಅಜಿತ್‌ ಪವಾರ್‌ ಎನ್‌ಸಿಪಿಯನ್ನು ಒಡೆದು, ಬಿಜೆಪಿ ನೇತೃತ್ವದ ಸರಕಾರದಲ್ಲಿ ಪಾಲುದಾರರಾಗಿದ್ದಾರೆ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಶರದ್‌ ಪವಾರ್‌ ಪುತ್ರಿ ಸುಪ್ರಿಯಾ ಸುಳೆ ವಿರುದ್ಧ ತಮ್ಮ ಪತ್ನಿಯನ್ನು ಕಣಕ್ಕಿಳಿಸಿ, ಸೋಲು ಕಂಡಿದ್ದರು. ಈ ಹಿನ್ನೆಲೆಯಲ್ಲೇ ಅವರು ಕುಟುಂಬವನ್ನು ಒಡೆಯುವವರನ್ನು ಜನರು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next