Advertisement

ಗೋ ಫ‌ಸ್ಟ್‌ ದಿವಾಳಿ ಅರ್ಜಿ ಸ್ವೀಕರಿಸಿದ ಎನ್‌ಸಿಎಲ್‌ಟಿ

08:27 PM May 10, 2023 | Team Udayavani |

ನವದೆಹಲಿ: ವಿತ್ತೀಯ ಸಂಕಷ್ಟಕ್ಕೆ ಗುರಿಯಾಗಿ ವಿಮಾನಗಳ ಹಾರಾಟ ಸ್ಥಗಿತಗೊಳಿಸಿರುವ ಗೋ ಫ‌ಸ್ಟ್‌ ಕಂಪನಿ ಸಲ್ಲಿಕೆ ಮಾಡಿರುವ ದಿವಾಳಿ ಅರ್ಜಿಯನ್ನು ರಾಷ್ಟ್ರೀಯ ಕಂಪನಿ ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಬುಧವಾರ ಸ್ವೀಕರಿಸಿ, ಅಂಗೀಕರಿಸಿದೆ.

Advertisement

ಒತೆಗೆ, ಅಭಿಲಾಶ್‌ ಲಾಲ್‌ ಅವರನ್ನು ಮಧ್ಯಂತರ ಪರಿಹಾರಕ (ಐಪಿಆರ್‌) ಎಂದು ನ್ಯಾ.ರಾಮಲಿಂಗಂ ಸುಧಾಕರ್‌ ಮತ್ತು ಎಲ್‌.ಎನ್‌.ಗುಪ್ತಾ ಅವರನ್ನು ಒಳಗೊಂಡ ನ್ಯಾಯಮಂಡಳಿ ನೇಮಕ ಮಾಡಿದೆ.

ಜತೆಗೆ ನಿರ್ದೇಶಕ ಮಂಡಳಿಯನ್ನು ಅಮಾನತಿನಲ್ಲಿ ಇಡಲು ಸೂಚಿಸಿದೆ. ಜತೆಗೆ ಕಂಪನಿಯ ವ್ಯವಹಾರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸೂಚಿಸಿದೆ. ಇದೊಂದು ಐತಿಹಾಸಿಕ ನಿರ್ಧಾರ ಎಂದು ಗೋ ಫ‌ಸ್ಟ್‌ ಸಿಇಒ ಕೌಶಿಕ್‌ ಖೋನಾ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next