Advertisement

ಸುಶಾಂತ್ ಸಾವು ಪ್ರಕರಣ: ಮುಂಬೈ- ಗೋವಾದ ಏಳು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ ಎನ್ ಸಿಬಿ

01:44 PM Sep 12, 2020 | keerthan |

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವು ಪ್ರಕರಣದಲ್ಲಿ ಮಾದಕ ನಶೆಯ ನಂಟಿನ ತನಿಖೆ ನಡೆಸುತ್ತಿರುವ ಎನ್ ಸಿಬಿ ಅಧಿಕಾರಿಗಳು ಮುಂಬೈ ಮತ್ತು ಗೋವಾದ ಏಳು ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

Advertisement

ಸುಶಾಂತ್ ಸಿಂಗ್ ಪ್ರಕರಣದ ಬಗ್ಗೆ ಇಂದು ಎನ್ ಸಿಬಿ ಕಚೇರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ ಎನ್ನಲಾಗಿದೆ.

ಎನ್‌ಸಿಬಿ ನಡೆಸಿದ ವಿಚಾರಣೆಯ ಸಮಯದಲ್ಲಿ, ರಿಯಾ ಕೆಲವು ಬಾಲಿವುಡ್ ಸೆಲೆಬ್ರಿಟಿಗಳ ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ ಎಂದು ವರದಿಯಾಗಿದೆ. ಸುಮಾರು 15 ಬಿ-ಟೌನ್ ಸೆಲೆಬ್ರೆಟಿಗಳು ಈಗ ಎನ್‌ಸಿಬಿ ರಾಡಾರ್‌ನಲ್ಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮಾಜಿ ನೌಕಾಪಡೆ ಅಧಿಕಾರಿಯ ಮೇಲೆ ಹಲ್ಲೆ: ಶಿವಸೇನೆ ಕಾರ್ಯಕರ್ತರಿಬ್ಬರು ಸೇರಿ ಆರು ಮಂದಿಯ ಬಂಧನ

ಬಾಲಿವುಡ್‌ನ 80% ತಾರೆಗಳು ಮಾದಕ ವಸ್ತು ಸೇವಿಸುತ್ತಾರೆ ಎಂದು ರಿಯಾ ತನಿಖೆ ವೇಳೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾದಕವಸ್ತು ತನಿಖೆಯಲ್ಲಿ ಎನ್‌ಸಿಬಿ ಬಾಲಿವುಡ್‌ನ 25 ಪ್ರಮುಖ ತಾರೆಯರನ್ನು ವಿಚಾರಣೆಗೆ ಕರೆಸಲು ಸಜ್ಜಾಗಿದೆ ಎಂಬ ವರದಿಗಳಿವೆ.

Advertisement

ಇದನ್ನೂ ಓದಿ: ಮುಗಿಯದ ಮಹಾರಾಷ್ಟ್ರ ಸರಕಾರ – ಬಾಲಿವುಡ್‌ ನಟಿ ಜಟಾಪಟಿ: ಸೋನಿಯಾ ಮಧ್ಯ ಪ್ರವೇಶಕ್ಕೆ ಆಗ್ರಹ

ನಟಿ ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್, ಡಿಸೈನರ್ ಸಿಮೋನೆ ಖಂಬತ್ತ, ಸುಶಾಂತ್ ಅವರ ಸ್ನೇಹಿತ ಮತ್ತು ಮಾಜಿ ಮ್ಯಾನೇಜರ್ ರೋಹಿಣಿ ಅಯ್ಯರ್ ಮತ್ತು ಚಲನಚಿತ್ರ ನಿರ್ಮಾಪಕ ಮುಖೇಶ್ ಛಾಬ್ರಾ ಮಾದಕ ದ್ರವ್ಯವನ್ನು ಸೇವಿಸಿದ್ದಾರೆ ಎಂದು ರಿಯಾ ಚಕ್ರವರ್ತಿ ಕೇಂದ್ರ ತನಿಖಾ ಸಂಸ್ಥೆಯ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ಜೀ ನ್ಯೂಸ್ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next