Advertisement

ತೋಟಗಾರಿಕೆ-ಪುಷ್ಪ ಬೆಳೆಗಾರರಿಗೆ ಪರಿಹಾರ ಕೊಡಿ

03:08 PM Apr 19, 2020 | Naveen |

ನಾಯಕನಹಟ್ಟಿ: ಕೊರೊನಾದಿಂದ ನಷ್ಟಕ್ಕೆ ಒಳಗಾದ ತೋಟಗಾರಿಕೆ ಹಾಗೂ ಪುಷ್ಪ ಬೆಳೆಗಾರರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಒತ್ತಾಯಿಸಿದ್ದಾರೆ.

Advertisement

ಶುಕ್ರವಾರ ತುರುವನೂರು ಹೋಬಳಿಯಲ್ಲಿ ಕೊರೊನಾ ಸಂಕಷ್ಟದಿಂದ ನಷ್ಟಕ್ಕೊಳಗಾಗಿರುವ ರೈತರ ಹೊಲಗಳಿಗೆ ಭೇಟಿ ನೀಡಿ ಅವರು ಮಾತನಾಡಿದರು. ಬೇಸಿಗೆಯಲ್ಲಿ ಪುಷ್ಪಕೃಷಿಯಿಂದ ಉತ್ತಮ ಲಾಭ ಪಡೆಯಬಹುದು ಎನ್ನುವ ಯೋಚನೆಯಿಂದ ಹೂವು ಬೆಳೆಯಲಾಗಿತ್ತು. ಹುಣಸೇಕಟ್ಟೆ,ಬಾಗೇನಹಾಳ್‌ ಸೇರಿದಂತೆ ನಾನಾ ಗ್ರಾಮಗಳಲ್ಲಿನ ಕೊಳವೆಬಾವಿ ಇರುವ ರೈತರು ಪುಷ್ಪಕೃಷಿ ಮಾಡಿದ್ದರು. ಜತೆಗೆ ಕಲ್ಲಂಗಡಿ, ಕರಬೂಜ, ಈರುಳ್ಳಿ, ಬಾಳೆ ಬೆಳೆಗಳನ್ನೂ ಬೆಳೆದಿದ್ದರು. ಆದರೆ ಲಾಕ್‌ ಡೌನ್‌ ಪರಿಣಾಮ ಸಾಗಾಟ ಹಾಗೂ ಬೇಡಿಕೆ ಕುಸಿತದಿಂದ ರೈತರಿಗೆ ನಷ್ಟವಾಗಿದೆ. ಮದುವೆ, ಜಾತ್ರೆ, ಸಮಾರಂಭಗಳಿಲ್ಲದೆ ಹೂವಿನ ಬೆಲೆ ಭಾರೀ ಪ್ರಮಾಣದಲ್ಲಿ ಕುಸಿದಿದೆ. ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳಿಗೆ ನಷ್ಟದ ವರದಿ ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ತೋಟಗಾರಿಕ ಹಾಗೂ ಕೃಷಿ ಸಚಿವರಿಗೆ ಬೆಳೆ ನಷ್ಟ ನೀಡುವಂತೆ ಒತ್ತಾಯಿಸಲಾಗುವುದು ಎಂದರು.

ಜಿಪಂ ಮಾಜಿ ಸದಸ್ಯ ಜಿ.ಟಿ. ಬಾಬು ರೆಡ್ಡಿ, ತಾಪಂ ಅಧ್ಯಕ್ಷ ಲಿಂಗರಾಜ್‌, ಕೃಷಿ ಇಲಾಖೆ ಅಧಿಕಾರಿ ಭಾರತಿ, ತೋಟಗಾರಿಕಾ ಇಲಾಖೆ ಅಧಿಕಾರಿ ಸುಧಾಕರ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next