Advertisement

ನವರಾತ್ರಿ: ಉದಯವಾಣಿ ನವರೂಪ- ಮೊದಲ ದಿನವೇ ಭರ್ಜರಿ ಪ್ರತಿಕ್ರಿಯೆ

04:53 PM Sep 26, 2022 | Team Udayavani |

ಉಡುಪಿ: ನಾರಿ ಶಕ್ತಿಯನ್ನು ಆರಾಧಿಸುವ, ಗೌರವಿಸುವ ಸಂಭ್ರಮಿಸುವ ನವರಾತ್ರಿ ಹಬ್ಬ ಇಂದಿನಿಂದ (ಸೆ.26) ಆರಂಭಗೊಂಡಿದೆ. ಈ ಮಹಾಪರ್ವದ ಸಡಗರವನ್ನು ಹೆಚ್ಚಿಸುವುದಕ್ಕಾಗಿ ಜನಮನದ ಜೀವನಾಡಿ ಉದಯವಾಣಿ ಆಯೋಜಿಸಿರುವ ನವರಾತ್ರಿ ನವರೂಪದ ಪ್ರಥಮ ದಿನದಂದು (ಬಿಳಿ ಬಣ್ಣ) ಮಧ್ಯಾಹ್ನವೇ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾವಿರಾರು ಫೋಟೊಗಳು ವಾಟ್ಸಪ್ ನಲ್ಲಿ ಹರಿದು ಬಂದಿದೆ.

Advertisement

ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಸಂಧ್ಯಾ ಎಸ್ .ಪೈಯವರು ಮೊದಲ ದಿನದ ಬಿಳಿ ಬಣ್ಣದ ರಂಗು ತುಂಬುವ ಅತಿಥಿಯಾಗಿದ್ದಾರೆ. ನವರಾತ್ರಿ ಇಂದಿನಿಂದ ಆರಂಭ. ಉದಯವಾಣಿಯ ನವರೂಪ ಉತ್ಸವವೂ ಸಹ, ನವಶಕ್ತಿಗಳನ್ನು ಆರಾಧಿಸಿ ನಮ್ಮೊಳಗಿನ ಧೀಶಕ್ತಿಯನ್ನು ಜಾಗೃತಗೊಳಿಸಿಕೊಳ್ಳೋಣ. ನಾಣು ನನ್ನ ಸಹೋದ್ಯೋಗಿಗಳೊಂದಿಗೆ ಬಿಳಿ ದಿರಿಸು ಉಟ್ಟು ನವರೂಪ ಉತ್ಸವದಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುತ್ತಿದ್ದೇವೆ. ಬನ್ನಿ ನೀವೂ ನಮ್ಮೊಂದಿಗೆ ಸೇರಿಕೊಳ್ಳಿ ಸಂಭ್ರಮಿಸಿ, ಫೋಟೋ ಕಳುಹಿಸಿ…ಇದು ಇಂದಿನ ಅತಿಥಿ ಡಾ.ಸಂಧ್ಯಾ ಎಸ್.ಪೈ ಅವರು ನೀಡಿರುವ ಆಹ್ವಾನವಾಗಿದೆ.

ನವರಾತ್ರಿ ಸಂಭ್ರಮವನ್ನು ಇಮ್ಮಡಿ, ಮುಮ್ಮಡಿಗೊಳಿಸಿಕೊಳ್ಳಲು ಉದಯವಾಣಿಯ ನವರೂಪ ಒಂದು ಉತ್ತಮ ಅವಕಾಶ. ವರ್ಷಕ್ಕೊಮ್ಮೆ ಕದತಟ್ಟುವ ಈ ಅಪೂರ್ವ ಕಾರ್ಯಕ್ರಮ ನಿಮ್ಮ ಹಬ್ಬದ ಆಚರಣೆಗೆ ಒಂದು ವಿಶಿಷ್ಟ ಆಯಾಮ ನೀಡಲಿದೆ. ಬನ್ನಿ…ಇಂದಿನಿಂದ ಆರಂಭಗೊಂಡ ಉದಯವಾಣಿ ನವರೂಪದಲ್ಲಿ ನಿಮ್ಮ ಗೆಳತಿಯರು, ಕುಟುಂಬ ಸದಸ್ಯೆಯರ ಜತೆ ಪಾಲ್ಗೊಳ್ಳಿ.

Advertisement

Udayavani is now on Telegram. Click here to join our channel and stay updated with the latest news.

Next