Advertisement

ಕಲ್ಲಿದ್ದಲು ಹಗರಣ: ನವೀನ್‌ ಜಿಂದಾಲ್‌ ಮತ್ತಿತರರಿಗೆ ಜಾಮೀನು

11:25 AM Sep 04, 2017 | Team Udayavani |

ಹೊಸದಿಲ್ಲಿ : ಮಧ್ಯಪ್ರದೇಶದಲ್ಲಿ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣಕ್ಕೆ ಸಂಬಂಧಿಸಿ ಇಲ್ಲಿನ ವಿಶೇಷ ನ್ಯಾಯಾಲಯ ಕೈಗಾರಿಕೋದ್ಯಮಿ ನವೀನ್‌ ಜಿಂದಾಲ್‌ ಮತ್ತು ಇತರರಿಗೆ ಜಾಮೀನು ಮಂಜೂರು ಮಾಡಿದೆ. 

Advertisement

ವಿಶೇಷ ನ್ಯಾಯಾಧೀಶ ಭರತ್‌ ಪರಾಶರ್‌ ಅವರು ಆರೋಪಿಗಳಿಗೆ ತಲಾ ಒಂದು ಲಕ್ಷ ರೂ. bond ಮತ್ತು ಅಷ್ಟೇ ಮೊತ್ತದ ಹಣಕ್ಕೆ ವೈಯಕ್ತಿಕ ಭದ್ರತೆಯೊಂದಿಗೆ ಜಾಮೀನು ಮಂಜೂರು ಮಾಡಿದರು. 

ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಧೀಶರು ಅ.31ಕ್ಕೆ ನಿಗದಿಸಿದರು. 

ಜಾಮೀನು ಪಡೆದಿರುವ ಇತರ ಆರೋಪಿಗಳೆಂದರೆ ಜಿಂದಾಲ್‌ ಸ್ಟೀಲ್‌ ಕಂಪನಿಯ ಮಾಜಿ ನಿರ್ದೇಶಕ ಸುಶೀಲ್‌ ಮಾರೂ, ಮಾಜಿ ಡೆಪ್ಯುಟಿ ಎಂಟಿ ಆನಂದ್‌ ಗೋಯಲ್‌ ಮತ್ತು ಸಿಇಓ ವಿಕ್ರಾಂತ್‌ ಗುಜ್ರಾಲ್‌. 

ಜಿಂದಾಲ್‌ ಅವ‌ರು ಜಾರ್ಖಂಡ್‌ನ‌ ಅಮರಕೊಂಡ ಮುರಗದಂಗಲ್‌ ಕಲ್ಲಿದ್ದಲು ನಿಕ್ಷೇಪ ಅಕ್ರಮ ಹಂಚಿಕೆಯಲ್ಲಿ ಕೂಡ ವಿಚಾರಣೆಯನ್ನು ಎದುರಿಸುತ್ತಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next