Advertisement

ನವೀನ್‌ ಗೌಡ, ಚೇತನ್‌ ಬಂಧನ; ಜಾಮೀನು ವಿಚಾರಣೆಗೆಂದು ಹೈಕೋರ್ಟ್‌ಗೆ ಬಂದಾಗ ಎಸ್‌ಐಟಿ ಬಲೆಗೆ

12:16 AM May 29, 2024 | Team Udayavani |

ಬೆಂಗಳೂರು: ಅಶ್ಲೀಲ ಪೆನ್‌ಡ್ರೈವ್‌ ಪ್ರಕರಣದಲ್ಲಿ ಹಾಸನದ ನವೀನ್‌ ಗೌಡ ಹಾಗೂ ಚೇತನ್‌ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಮಂಗಳವಾರ ಬಂಧಿಸಿದೆ.

Advertisement

ಈ ಇಬ್ಬರ ವಿರುದ್ಧ ಅಶ್ಲೀಲ ವೀಡಿಯೋ ಗಳಿರುವ ಪೆನ್‌ ಡ್ರೈವ್‌ ಹಂಚಿಕೆ ಆರೋಪವಿದೆ. ಇಬ್ಬರೂ ನಿರೀಕ್ಷಣ ಜಾಮೀನಿಗಾಗಿ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮಂಗಳವಾರ ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಇಬ್ಬರೂ ಆಗಮಿಸಿದ್ದರು. ಆ ವೇಳೆ ಎಸ್‌ಐಟಿ ಅಧಿಕಾರಿಗಳು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಅವರ ಜತೆ ಇದ್ದ ಮತ್ತೂಬ್ಬ ವ್ಯಕ್ತಿಯನ್ನೂ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಇಬ್ಬರನ್ನೂ ಎಸ್‌ಐಟಿ ಕಚೇರಿಗೆ ಕರೆತಂದ ಅಧಿಕಾರಿಗಳು ಪ್ರಾಥ ಮಿಕ ಮಾಹಿತಿ ಕಲೆ ಹಾಕಿದ್ದರು. ಹಾಸನ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದರಿಂದ ಹಾಸನ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಲು ಎಸ್‌ಐಟಿ ಸಿದ್ಧತೆ ಮಾಡಿಕೊಂಡಿದೆ.

ಅರ್ಜಿ ವಿಚಾರಣೆ ಜೂ. 3ಕ್ಕೆ
ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವೀಡಿಯೋ ಹಂಚಿದ ಆರೋಪದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ನಾಲ್ವರು ಆರೋಪಿಗಳು ಸಲ್ಲಿಸಿದ್ದ ನಿರೀಕ್ಷಣ ಜಾಮೀನು ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್‌ ಜೂ. 3ಕ್ಕೆ ಮುಂದೂಡಿದೆ. ಆರೋಪಿಗಳಾದ ನವೀನ್‌ ಗೌಡ ಅಲಿಯಾಸ್‌ ಎನ್‌.ಆರ್‌. ನವೀನ್‌ ಕುಮಾರ್‌, ಎನ್‌. ಕಾರ್ತಿಕ್‌, ಬಿ.ಸಿ. ಚೇತನ್‌ ಕುಮಾರ್‌ ಮತ್ತು ಎಚ್‌.ವಿ. ಪುಟ್ಟರಾಜು ನಿರೀಕ್ಷಣ ಜಾಮೀನು ಕೋರಿ ಹೈಕೋರ್ಟ್‌ಗೆ ಪ್ರತ್ಯೇಕ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ಸರಕಾರದ ಪರ ವಕೀಲರು ಕಾಲಾವಕಾಶ ಕೋರಿದರು. ವಿಚಾರಣೆ ವೇಳೆ ಹಾಜರಿದ್ದ ಪ್ರಕರಣದ ದೂರುದಾರ ಎಂ.ಜಿ. ಪೂರ್ಣಚಂದ್ರ ತೇಜಸ್ವಿ ತಮ್ಮ ಪರ ವಕೀಲರನ್ನು ನಿಯೋಜಿಸಿಕೊಳ್ಳಲು ಸಮಯಾವಕಾಶ ನೀಡಲು ಕೋರಿದರು.

ಆರೋಪಿ ಚೇತನ್‌ ಕುಮಾರ್‌ ಪರ ವಕೀಲರು, ಇಂದು ವಿಚಾರಣೆಗೆ ಹಾಜರಾಗುವಂತೆ ಚೇತನ್‌ ಕುಮಾರ್‌ಗೆ ಎಸ್‌ಐಟಿ ತನಿಖಾಧಿಕಾರಿ ನೋಟಿಸ್‌ ನೀಡಿದ್ದಾರೆ. ಪದೇ ಪದೆ ನೋಟಿಸ್‌ ನೀಡುತ್ತಿದ್ದು, ಅವರಿಗೆ ಬಂಧನ ಭೀತಿ ಇದೆ. ಆದ್ದರಿಂದ ಅರ್ಜಿಯನ್ನು ತ್ವರಿತವಾಗಿ ವಿಚಾರಣೆ ನಡೆಸಬೇಕು ಎಂದು ಕೋರಿದರು. ಈ ಮನವಿ ಪರಿಗಣಿಸಿದ ನ್ಯಾಯಮೂರ್ತಿ ಎಂ.ಜಿ. ಉಮಾ ಅವರ ಪೀಠವು ವಿಚಾರಣೆಯನ್ನು ಜೂ. 3ಕ್ಕೆ ಮುಂದೂಡಿತು.

Advertisement

ಕೋರ್ಟ್‌ ಆವರಣದಲ್ಲೇ ಖೆಡ್ಡಾ!
-ಪ್ರಕರಣ ದಾಖಲಾದ ಮೇಲೆ ತಲೆ ಮರೆಸಿ ಕೊಂಡಿದ್ದ ನವೀನ್‌, ಚೇತನ್‌
-ಇಬ್ಬರು ಆರೋಪಿಗಳ ಚಲನವಲನಗಳ ಮೇಲೆ ನಿಗಾ ಇರಿಸಿದ್ದ ಎಸ್‌ಐಟಿ
-ಹೈಕೋರ್ಟ್‌ನಿಂದ ಹೊರಬರುತ್ತಿದ್ದಂತೆ ಖೆಡ್ಡಾಕ್ಕೆ ಬೀಳಿಸಿದ ಅಧಿಕಾರಿಗಳು

 

Advertisement

Udayavani is now on Telegram. Click here to join our channel and stay updated with the latest news.

Next