Advertisement
ಎರಡೂ ಮೇಲ್ಸೇತುವೆಗಳ ಕಾಮಗಾರಿ ಆರಂಭಗೊಂಡು 6 ವರ್ಷಗಳಾದರೂ ಇನ್ನೂ ಪೂರ್ಣವಾಗಿಲ್ಲ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿತ್ಯ ಅಪಘಾತ, ಟ್ರಾಫಿಕ್ ಜಾಮ್ ಸಂಭವಿಸುತ್ತಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಪ್ರತಿದಿನ ತೊಂದರೆ ಅನುಭವಿಸುತ್ತಿದ್ದಾರೆ ಎನ್ನುವುದನ್ನು ಎಸಿ ಅವರು ನೋಟಿಸ್ನಲ್ಲಿ ಉಲ್ಲೇಖೀಸಿದ್ದಾರೆ.
ಈ ಸಂಬಂಧ ಜೂ. 6ರಂದು ಕುಂದಾಪುರದ ಮಿನಿವಿಧಾನ ಸೌಧ ದಲ್ಲಿರುವ ಎಸಿ ಕೋರ್ಟ್ನಲ್ಲಿ ಎಸಿ ಭೂಭಾಲನ್ ನೇತೃತ್ವದಲ್ಲಿ ನವಯುಗ ಕಂಪೆನಿಯ ಅಧಿಕಾರಿಗಳ ವಿಚಾರಣೆ ನಡೆಯಲಿದೆ. ಟೋಲ್ ಸ್ವೀಕಾರ ಯಾಕೆ ರದ್ದು ಮಾಡಬಾರದು?
ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ನವಯುಗ ಕಂಪೆನಿ ಯವರು ಈಗಾಗಲೇ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಟೋಲ್ ಸಂಗ್ರಹ ಮಾಡುತ್ತಿದ್ದಾರೆ. ಶೇ. 75ರಷ್ಟು ಕಾಮಗಾರಿ ಪೂರ್ತಿ ಯಾಗದೆ ಟೋಲ್ ಸಂಗ್ರಹಿಸುವಂತಿಲ್ಲ ಎನ್ನುವ ನಿಯಮವಿದೆ. ಈಗ ಯಾಕೆ ಟೋಲ್ ಸಂಗ್ರಹ ನಿಲ್ಲಿಸಬಾರದು ಎಂದು ಉಪ ವಿಭಾಗಧಿಕಾರಿಯವರು ನವಯುಗ ಕಂಪೆನಿಯನ್ನು ಖಾರವಾಗಿಯೇ ಪ್ರಶ್ನಿಸಿದ್ದಾರೆ. ಕುಂದಾಪುರ ಹಾಗೂ ಉಡುಪಿಯ ಫ್ಲೈ ಓವರ್ ಮಂದಗತಿಯ ಕಾಮಗಾರಿ ಕುರಿತಂತೆ ‘ಉದಯವಾಣಿ’ ಪತ್ರಿಕೆಯು ಸಾಕಷ್ಟು ಬಾರಿ ವಿಶೇಷ ವರದಿ ಪ್ರಕಟಿಸಿ, ಸಂಬಂಧಿಸಿದವರ ಗಮನ ಸೆಳೆದಿತ್ತು.
Related Articles
ಟಿ. ಭೂಬಾಲನ್ ಸಹಾಯಕ ಆಯುಕ್ತ
Advertisement