Advertisement

Navaratri Effect : ಬಸ್ ಸೀಟಿಗಾಗಿ ಕಿಟಕಿಯಲ್ಲಿ ಮಕ್ಕಳನ್ನು ಟವೆಲ್ ನಂತೆ ತುಂಬಿದ ಮಹಿಳೆಯರು

02:14 PM Oct 22, 2023 | Team Udayavani |

ಚಿಕ್ಕಮಗಳೂರು:  ನವರಾತ್ರಿ ಹಿನ್ನೆಲೆ ಟೆಂಪಲ್ ರನ್ ಆರಂಭಿಸಿರುವ ಮಹಿಳೆಯರು ಶಕ್ತಿ ಯೋಜನೆಯ ಫ್ರೀ ಬಸ್ ಗೆ ಮುಗಿ ಬಿದ್ದಿದ್ದು, ಬಸ್ಸಿನ ಕಿಟಕಿಯಲ್ಲಿ ಮಕ್ಕಳನ್ನು ಟವೆಲ್ ನಂತೆ ತುಂಬಿದ ದೃಶ್ಯಗಳು ಜಿಲ್ಲೆಯ ಶೃಂಗೇರಿಯಲ್ಲಿ ಕಂಡುಬಂತು.

Advertisement

ಹಬ್ಬದ ಹಿನ್ನಲೆ ಮಹಿಳೆಯರು-ಮಕ್ಕಳು ದೇವಾಲಯ ದರ್ಶನಕ್ಕೆ ಹೊರಟಿದ್ದು, ರಾಜ್ಯದ ವಿವಿದೆಡೆಯಿಂದ ಸಾವಿರಾರು ಭಕ್ತಾದಿಗಳು ಆಗಮಿಸುತ್ತಿದ್ದು, ಶೃಂಗೇರಿ ದೇವಾಲಯ ಭಕ್ತರಿಂದ ತುಂಬಿ ತುಳುಕುತ್ತಿದೆ.

ಒಂದೇ ಬಸ್ ನಲ್ಲಿ 300ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದು ಪ್ರಯಾಣಿಕರನ್ನು ನಿಭಾಯಿಸಲು ಡ್ರೈವರ್, ಕಂಡಕ್ಟರ್ ಗಳು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಶಕ್ತಿ ಯೋಜನೆಯ ಫ್ರೀ ಬಸ್ ಗೆ ಮುಗಿ ಬಿದ್ದ ಪ್ರಯಾಣಿಕರು, ಸೀಟು ಮೀಸಲಾಗಿರಿಸಲು ಮಹಿಳೆಯರು ಮಕ್ಕಳನ್ನು ಟವೆಲ್ ನಂತೆ ಬಸ್ ಕಿಟಕಿಯಿಂದ ಮಕ್ಕಳನ್ನು ಹತ್ತಿಸುತ್ತಿದ್ದರು. ಶಕ್ತಿ ಯೋಜನೆಯಿಂದ ಪ್ರವಾಸಿ ಕೇಂದ್ರಗಳು ತುಂಬಿ ತುಳುಕುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next