Advertisement

ಸಹಜ ಪ್ರವಾಸ: ಚೆನ್ನೈಗೆ ತೆರಳಿದ್ದ ಕಾಂಗ್ರೆಸ್ ಶಾಸಕರು ಗೋವಾಕ್ಕೆ ವಾಪಸ್!

04:46 PM Jul 18, 2022 | Team Udayavani |

ಪಣಜಿ:  ಜುಲೈ 17ರಂದು ರಾತ್ರಿ ಗೋವಾದಿಂದ ಚೆನ್ನೈಗೆ ತೆರಳಿದ್ದ ಕಾಂಗ್ರೆಸ್ ಶಾಸಕರು ಗೋವಾಕ್ಕೆ ವಾಪಸ್ಸಾಗಿದ್ದಾರೆ. ಈ ವೇಳೆ ಪ್ರವಾಸದ ಕಾರಣ ಕೇಳಿದಾಗ, ನಾವು ಸಹಜ ಪ್ರವಾಸ ಮಾಡಬಹುದಲ್ಲವೇ? ಎಂದು ಉತ್ತರಿಸುವ ಮೂಲಕ ಅವರು ಮುಖ್ಯ ವಿಷಯದ ಬಗ್ಗೆ ಮಾತನಾಡುವುದನ್ನು ತಪ್ಪಿಸಿದ್ದಾರೆ.

Advertisement

ಚೆನ್ನೈಗೆ ತೆರಳಿದ್ದ ಐವರು ಕಾಂಗ್ರೆಸ್ ಶಾಸಕರಲ್ಲಿ ಸಂಕಲ್ಪ್ ಅಮೋನ್ಕರ್, ಯೂರಿ ಅಲೆಮಾವ್, ರುಡಾಲ್ಫ್ ಫೆನಾರ್ಂಡಿಸ್, ಎಲ್ಟನ್ ಡಿಕೋಸ್ಟಾ ಮತ್ತು ಕಾರ್ಲೋಸ್ ಫೆರೇರಾ ಒಳಗೊಂಡಿದ್ದಾರೆ.  ಚೆನ್ನೈಗೆ ತೆರಳಿದ್ದ ಐವರು ಶಾಸಕರು ವಾಸ್ಕೋ ತಲುಪಿದ ತಕ್ಷಣ, ಯಾವ ಕಾರಣಕ್ಕಾಗಿ ಪ್ರವಾಸ ಮಾಡಿದ್ದೀರಿ? ಈ ಬಗ್ಗೆ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದಾಗ, ”ನಾವು ಯಾವುದೇ ರಾಜಕೀಯ ಕಾರಣಕ್ಕಾಗಿ ಈ ಪ್ರವಾಸ ಮಾಡಿಲ್ಲ. ಅಂದಹಾಗೆ, ನಾವು ಸುಲಭವಾಗಿ, ಸಹಜ ಪ್ರವಾಸ  ಮಾಡಬಹುದಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

ಗೋವಾ ಕಾಂಗ್ರೆಸ್ ನಲ್ಲಿ ಆಂತರಿಕ ಭಿನ್ನಮತ ಇನ್ನೂ ಶಮನವಾಗಿಲ್ಲ ಎಂದು ಹೇಳಲಾಗುತ್ತಿದ್ದು, ಈಗಲೂ ಕೂಡ ಕೆಲ ಕಾಂಗ್ರೆಸ್ ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಯಾವುದೇ ಕ್ಷಣದಲ್ಲಿ ಕೆಲ ಶಾಸಕರು ಪಕ್ಷಾಂತರ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next