Advertisement

ರಾಷ್ಟ್ರೀಯ ವಾಲಿಬಾಲ್‌ ಚಾಂಪಿಯನ್‌ಶಿಪ್‌: ಕ್ವಾರ್ಟರ್‌ ಫೈನಲ್‌ಗೆ ಕರ್ನಾಟಕ

11:19 PM Feb 05, 2023 | Team Udayavani |

ಕುಂದಾಪುರ: ಅಸ್ಸಾಂನ ಗುವಾಹಟಿಯಲ್ಲಿ ನಡೆಯುತ್ತಿರುವ 71ನೇ ರಾಷ್ಟ್ರೀಯ ವಾಲಿಬಾಲ್‌ ಪಂದ್ಯಾವಳಿಯಲ್ಲಿ ಕುಂದಾಪುರದ ಅನೂಪ್‌ ಡಿ’ಕೋಸ್ಟಾ ನಾಯಕತ್ವದ ಕರ್ನಾಟಕ ತಂಡ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶಿಸಿದೆ.

Advertisement

ಆರಂಭಿಕ ಪಂದ್ಯದಲ್ಲಿ ಹರ್ಯಾಣ ಎದುರು 3-1 ಸೆಟ್‌ನಲ್ಲಿ ಗೆದ್ದ ಕರ್ನಾಟಕ, ಬಳಿಕ ತಮಿಳುನಾಡನ್ನು 3-2 ಅಂತರದಿಂದ ಮಣಿಸಿತು. ಆದರೆ ಪಂಜಾಬ್‌ ವಿರುದ್ಧ 1-3 ಅಂತರದಿಂದ ಸೋಲನುಭವಿಸಿತು.

ಗುವಾಹಟಿಗೆ ತೆರಳಿರುವ 12 ಮಂದಿಯ ಕರ್ನಾಟಕ ತಂಡದಲ್ಲಿ ಅನೂಪ್‌ ಜತೆ, ಕೋಟೇಶ್ವರ ಕಟೆರೆಯ ಚಂದನ್‌ ಆಚಾರ್ಯ, ಭಟ್ಕಳದ ನವೀದ್‌ ಖಾನ್‌ ಆಡುತ್ತಿದ್ದಾರೆ.

 

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next