Advertisement

ನ್ಯಾಶನಲ್‌ ಹೆರಾಲ್ಡ್‌ : ದಿಲ್ಲಿ ಕೋರ್ಟಲ್ಲಿ ಸ್ವಾಮಿ ಹೇಳಿಕೆ ದಾಖಲು

04:46 PM Jul 21, 2018 | udayavani editorial |

ಹೊಸದಿಲ್ಲಿ : ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಅವರಿಂದು ನ್ಯಾಶನಲ್‌ ಹೆರಾಲ್ಡ್‌ ಕೇಸಿಗೆ ಸಂಬಂಧಿಸಿ ದಿಲ್ಲಿಯ ಪಟಿಯಾಲಾ ಹೈಕೋರ್ಟಿನಲ್ಲಿ ತಮ್ಮ ಹೇಳಿಕೆಯನ್ನು ದಾಖಲಿಸಿದರು.

Advertisement

ಸ್ವಾಮಿ ಅವರು ಕಾಂಗ್ರೆಸ್‌ ಮುಖ್ಯಸ್ಥ ರಾಹುಲ್‌ ಗಾಂಧಿ, ತಾಯಿ ಸೋನಿಯಾ ಗಾಂಧಿ ಮತ್ತು ಇತರರ ವಿರುದ್ಧ ಈ ಕೇಸನ್ನು ದಾಖಲಿಸಿದ್ದರು.

ಅಡಿಶನಲ್‌ ಚೀಫ್ ಮೆಟ್ರೋಪಾಲಿಟಾನ್‌ ಮ್ಯಾಜಿಸ್ಟ್ರೇಟ್‌ ಸಮರ್‌ ವಿಶಾಲ್‌ ಅವರು ಸ್ವಾಮಿ ಅವರ ಆಂಶಿಕ ಹೇಳಿಕೆಯನ್ನು ದಾಖಲಿಸಿಕೊಂಡು ಕೇಸಿನ ವಿಚಾರಣೆಯನ್ನು ಆಗಸ್ಟ್‌ 25ಕ್ಕೆ ನಿಗದಿಸಿದರು. ಅಂದು ಸ್ವಾಮಿ ಅವರ ಹೇಳಿಕೆಯ ಉಳಿದ ಭಾಗವನ್ನು ದಾಖಲಿಸಲಾಗುವುದು. 

Advertisement

Udayavani is now on Telegram. Click here to join our channel and stay updated with the latest news.

Next