Advertisement

ರಾಷ್ಟ್ರಗೀತೆಯನ್ನು ನಮಗೆ ಮುತಾಲಿಕ್ ಹೇಳಿ ಕೊಡಬೇಕಾ?: ಜಮೀರ್ ಅಹ್ಮದ್ ಕಿಡಿ

03:33 PM May 16, 2022 | Team Udayavani |

ಚಾಮರಾಜಪೇಟೆ: ಏನು ನಮಗೆ ರಾಷ್ಟ್ರಗೀತೆ ಹಾಡೋದನ್ನು ಮುತಾಲಿಕ್ ಹೇಳಿ ಕೊಡಬೇಕಾ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮೇಲೆ ಚಾರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಕಿಡಿ ಕಾರಿದ್ದಾರೆ.

Advertisement

ಬೆಂಗಳೂರಿನಲ್ಲಿ ಉರ್ದು ಬಾಲಕಿಯರ ಮಾದರಿ ಪ್ರಾಥಮಿಕ ಶಾಲೆ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅವರು, ರಾಷ್ಟ್ರಗೀತೆ ಯೊಂದಿಗೆ ನಾವು ಶಾಲೆಯನ್ನು ಆರಂಭಿಸಿದ್ದೇವೆ. ರಾಷ್ಟ್ರಗೀತೆಯನ್ನು ಕಡ್ಡಾಯ ಮಾಡಬೇಕು ಎಂದು ನಿನ್ನೆ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ನಾವು ಹಿಂದಿನಿಂದಲೂ ರಾಷ್ಟ್ರಗೀತೆ ಹಾಡಿಕೊಂಡು ಬರುತ್ತಿದ್ದೇವೆ. ಬೇಕಂತಲೆ ವಿವಾದವನ್ನು ಸೃಷ್ಟಿ ಮಾಡೋದಕ್ಕೆ ಒಂದು ಹುನ್ನಾರ ಮಾಡಿದ್ದಾರೆ ಎಂದರು.

ರಾಷ್ಟ್ರಗೀತೆ ಯಾರಿಗೆ ಇಷ್ಟ ಇಲ್ಲ? ಕಡ್ಡಾಯ ಮಾಡಿದರೆ ನಮಗೂ ಖುಷಿ. ರಾಷ್ಟ್ರಗೀತೆ ಹಾಡಬೇಕು ಅಂತಾ ಕಡ್ಡಾಯ ಇತ್ತಾ? 2023ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಡುತ್ತಿರುವ ಗಿಮಿಕ್ ಇದು ಎಂದರು.

ಇದನ್ನೂ ಓದಿ : ಟೆಸ್ಟ್ ಡ್ರೈವ್ ಮಾಡುವ ನೆಪದಲ್ಲಿ ಕಾರು ಕದ್ದವ ಮೂರು ತಿಂಗಳ ಬಳಿಕ ಸಿಕ್ಕಿ ಬಿದ್ದಿದ್ದೇಗೆ ?

ಪ್ರಮೋದ್ ಮುತಾಲಿಕ್ ರಾಷ್ಟ್ರಗೀತೆಯನ್ನು ಮದರಸಾಗಳಲ್ಲಿ ಖಡ್ಡಾಯ ಮಾಡಬೇಕು ಎಂದು ಹೇಳಿಕೆ ನೀಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next