Advertisement

Narayanapur: ವಿದ್ಯುತ್‌ ತಂತಿ ತಗುಲಿ ಮಹಿಳೆ ಸಾವು

08:57 AM Jul 04, 2024 | Team Udayavani |

ನಾರಾಯಣಪುರ: ಮಹಿಳೆಯೊಬ್ಬರು ವಿದ್ಯುತ್ ತಂತಿ ತಗುಲಿ ಮೃತಪಟ್ಟ ಘಟನೆ ಸಮೀಪದ ರಾಜನ ಕೋಳೂರ ಗ್ರಾಮದಲ್ಲಿ ಜು.3ರ ಬುಧವಾರ ಸಂಜೆ ನಡೆದಿದೆ.

Advertisement

ಮುದನೂರು ಗ್ರಾಮದ ಸವಿತಾ ಮರೆಪ್ಪ ದೊಡ್ಡಮನಿ(30) ಮೃತ ಮಹಿಳೆ.

ಮಹಿಳೆ ಬಟ್ಟೆ ಒಣಗಿಸಲು ಬಟ್ಟೆಯನ್ನು ತಂತಿಗೆ ಹಾಕುವ ವೇಳೆ ಮನೆಗೆ ಸಂಪರ್ಕದ ವಿದ್ಯುತ್ ತಂತಿ ಬಟ್ಟೆ ಹಾಕುವ ತಂತಿಗೆ ತಗುಲಿದ್ದರಿಂದ ವಿದ್ಯುತ್ ಪ್ರಹರಿಸಿ ಈ ಘಟನೆ ನಡೆದಿದೆ.

ಸವಿತಾ ರಾಜಕೋಳುರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಫ್ ನರ್ಸ್‌ ಆಗಿ ಸೇವೆ ಸಲ್ಲಿಸುತ್ತಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಕೊಡೇಕಲ್ ಠಾಣೆಯ ಪ್ರಭಾರಿ ಪಿಎಸ್ಐ ಇಂದುಮತಿ ಪಾಟೀಲ್ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next