Advertisement

ದೆಹಲಿಗೆ ಬರಲು ಇಷ್ಟವಾಗುವುದಿಲ್ಲ: ನಾರಾಯಣ ಮೂರ್ತಿ

08:40 AM Feb 22, 2023 | Team Udayavani |

ನವದೆಹಲಿ: ದೇಶದ ರಾಜಧಾನಿ ನವದೆಹಲಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಅತ್ಯಧಿಕವಾಗಿದೆ. ಹೀಗಾಗಿ ನವದೆಹಲಿಗೆ ಬರುವುದು ನನಗೆ ಹಿತ ಎನಿಸುವುದಿಲ್ಲ ಎಂದು ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣ ಮೂರ್ತಿ ಬೇಸರ ವ್ಯಕ್ತಪಡಿಸಿದರು.

Advertisement

ಅಖಿಲ ಭಾರತ ನಿರ್ವಹಣಾ ಸಂಘದ(ಎಐಎಂಎ) ಸಂಸ್ಥಾಪನ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, “ನಾನು ದೆಹಲಿ ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ಇರುವ ಸ್ಥಳಕ್ಕೆ ಸಂಚರಿಸುತ್ತಿದೆ.

ಈ ವೇಳೆ ಟ್ರಾಫಿಕ್‌ ಸಿಗ್ನಲ್‌ನಲ್ಲಿ ಕೆಂಪು ದೀಪ ಇದ್ದರೂ ಬೈಕ್‌ಗಳು, ಕಾರುಗಳು ಇತರೆ ವಾಹನಗಳು ಸಂಚರಿಸುತ್ತಿದ್ದವು. ಜನರಿಗೆ ತಾಳ್ಮೆ ಕಡಿಮೆಯಾಗಿದೆ. 1-2 ನಿಮಿಷ ಸಿಗ್ನಲ್‌ನಲ್ಲಿ ನಿಲ್ಲುವ ಸಾಮಾಜಿಕ ಹೊಣೆಗಾರಿಯನ್ನು ಅವರು ಮರೆಯುತ್ತಿದ್ದಾರೆ,’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ನಮ್ಮ ವಸ್ತುಗಳಿಗಿಂತಲೂ ಹೆಚ್ಚಿನ ಕಾಳಜಿಯಿಂದ ಸಾರ್ವಜನಿಕ ಆಸ್ತಿಯನ್ನು ನಾವು ಬಳಸಬೇಕಿದೆ. ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಮನೆಯಲ್ಲಿ ಈ ಸಂಸ್ಕಾರವನ್ನು ನಾವು ಕಲಿಸಬೇಕಿದೆ,’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next