Advertisement

ನಾರಾಯಣ ಭಾಗ್ವತರಿಗೆ ರಾಷ್ಟ್ರ ಮಟ್ಟದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ

07:30 PM Jan 06, 2023 | Team Udayavani |

ಶಿರಸಿ: ಬೆಂಗಳೂರಿನಲ್ಲಿ‌ ನಡೆದ ರಾಷ್ಟ್ರ ಮಟ್ಟದ‌ ವಿಜ್ಞಾನ ನಾಟಕೋತ್ಸವದಲ್ಲಿ ಇಲ್ಲಿನ ಮಾರಿಕಾಂಬಾ ಪ್ರೌಢ ಶಾಲೆಯ ಕನ್ನಡ ಶಿಕ್ಷಕ ನಾರಾಯಣ ಭಾಗ್ವತ ಇವರು ರಾಷ್ಟ್ರ ಮಟ್ಟದ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂ ಸಭಾಂಗಣದಲ್ಲಿ ನಡೆದ ಎರಡು ದಿನಗಳ ನಾಟಕೋತ್ಸವದಲ್ಲಿ ಮಾರಿಕಾಂಬಾ ಪ್ರೌಢ ಶಾಲೆಯ ಮಕ್ಕಳ ಮೂಲಕ ದಕ್ಷಿಣ ಭಾರತ‌ ಪ್ರತಿನಿಧಿಸಿದ್ದ ಒಂದು ಲಸಿಕೆ‌ ಕಥೆ ನಾಟಕದ ನಿರ್ದೇಶನಕ್ಕೆ ಈ ಪ್ರಶಸ್ತಿ ಅರಸಿ ಬಂದಿದೆ. ಚಿತ್ರನಟ ಅನಿರುದ್ಧ ಪ್ರಶಸ್ತಿ ಪ್ರದಾನ ‌ಮಾಡಿ ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next