Advertisement

ಕನಕಪುರದಲ್ಲಿ “ನನ್ನ ಪ್ರಕಾರ’

03:10 PM Nov 24, 2017 | Team Udayavani |

ಜಿ.ವಿ.ಕೆ ಕಂಬೈನ್ಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ “ನನ್ನ ಪ್ರಕಾರ ಚಿತ್ರಕ್ಕಾಗಿ ಕಿರಣ್‌ ಕಾವೇರಪ್ಪ ಅವರು ಬರೆದಿರುವ “ಹೂ ನಗೆ ಆಮಂತ್ರಿಸಿದೆ ಮರಳಾಗಿ ಹೋದೆ. ಎಂದಿನ ಹಾಗೆ ಒಲವೆ ಸತಾಯಿಸುವೆ ನೀ ಸರಿಯೇ ಎಂಬ ಹಾಡಿನ ಚಿತ್ರೀಕರಣ ಕನಕಪುರ ಬಳಿಯ ಮನೆಯೊಂದರಲ್ಲಿ ನಡೆದಿದೆ.

Advertisement

ಪ್ರಿಯಾಮಣಿ ಹಾಗೂ ಕಿಶೋರ್‌ ಅಭಿನಯಿಸಿದ ಈ ಹಾಡಿಗೆ ಮದನ್‌-ಹರಿಣಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಸಂಕಲನದೊಂದಿಗೆ ನಿರ್ದೇಶನ ಮಾಡುತ್ತಿರುವವರು ವಿಜಯ್‌ ಬಾಲಾಜಿ. ಅರ್ಜುನ್‌ ರಾಮು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ವಿಜಯ್‌ಬಾಲಾಜಿ, ಚಂದನ್‌ಕುಮಾರ್‌ ಅವರ ಸಂಭಾಷಣೆ, ಮನೋಹರ್‌ಜೋಷಿ ಅವರ ಛಾಯಾಗ್ರಹಣ ಹಾಗೂ ಜಯಂತ್‌ಕಾಯ್ಕಿಣಿ ಪ್ರೇಮ್‌ ಖುಷಿ, ಕಿರಣ್‌ ಅವರ ಸಾಹಿತ್ಯ ಈ ಚಿತ್ರಕ್ಕಿದೆ. ಜಿವಿಕೆ ಕಂಬೈನ್ಸ್‌ ನಿರ್ಮಾಣ ಮಾಡುತ್ತಿದ್ದು, ಕಿಶೋರ್‌, ಪ್ರಿಯಾಮಣಿ, ಮಯೂರಿ, ವಿಹಾನ್‌ಗೌಡ ಕಾಣಿಸಿಕೊಳ್ಳಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next