Advertisement

ನಂಜನಗೂಡು: ಪೌಲ್ಟ್ರಿ ಫಾರಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಾರ್ಮಿಕನ ಶವ ಪತ್ತೆ

08:01 PM May 22, 2022 | Team Udayavani |

ನಂಜನಗೂಡು : ತಾಲ್ಲೂಕಿನ ಸೂರಳ್ಳಿ ಗ್ರಾಮದ ಪೌಲ್ಟ್ರಿ ಫಾರಂ ಮತ್ತು ಮೇಕೆ ಸಾಕಣೆಯ ಖಾಸಗಿ ಮಾಲೀಕನ ಜಮೀನಿನ ಕೊಠಡಿಯಲ್ಲಿ ಅನುಮಾನಾ ಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಕೂಲಿ ಕಾರ್ಮಿಕನ ಶವ ಕಂಡು ಬಂದಿದೆ.

Advertisement

*ಸೂರಳ್ಳಿ ಗ್ರಾಮದ ಶ್ರೀನಿವಾಸ ಶೆಟ್ಟಿ (40) ಮೃತ ಕೂಲಿ ಕಾರ್ಮಿಕ. ಮೈಸೂರು ಮೂಲದ ಉಮೇಶ್ ಎಂಬುವರ ಮಾಲೀಕನಿಗೆ ಸೇರಿದ ಫಾರಂ ನಲ್ಲಿ 1 ವರ್ಷಗದಿಂದ ಶ್ರಿನಿವಾಸ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಇದು ಸಾವಲ್ಲ ಕೊಲೆ ಎಂದ ಮೃತನ ಪತ್ನಿ ರಾಜೇಶ್ವರಿ ಮಗಳು ಸುಕನ್ಯ ಆರೋಪಿಸಿದ್ದಾರೆ. ಕುಟುಂಬಸ್ಥರ ಜತೆಗೂಡಿ ಸ್ಥಳಕ್ಕೆ ಭೇಟಿ ನೀಡಿದ ನಂತರ ನಂಜಗೂಡು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ನನಗೂ ಘಟನೆಗೂ ಸಂಭಂದವೇ ಇಲ್ಲಾ ಎಂದಪೌಲ್ಟ್ರಿ ಮಾಲೀಕ ಉಮೇಶ್ ಹೇಳಿದ್ದಾರೆ.

ಸೂರಳ್ಳಿ ಮತ್ತು ಮಸಗೆ ಗ್ರಾಮಸ್ಥರು ರಿಂದ ಸರ್ಕಾರಿ ಆಸ್ಪತ್ರೆಯ ಶವ ಸಂಸ್ಕಾರ ಘಟಕದ ಮುಂದೆ ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಲಾಗಿದ್ದು,ನಂತರ ಸ್ಥಳಕ್ಕೆ ಗ್ರಾಮಾಂತರ ಪೋಲಿಸ್ ಠಾಣೆಯ ಪಿಎಸ್ ಐ ಜಯರಾಮ್ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಾಲೀಕನ ಬಂಧನ ಅಥವಾ ಸೂಕ್ತ ಪರಿಹಾರ ‌ಅಗುವವರಿಗೂ ಶವ ಪಡೆಯಲು ಕುಟುಂಬದವರ ನಿರಾಕರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next