Advertisement

ಮೇ 17 ರ ವರೆಗೆ ನಂದಿ ಗಿರಿಧಾಮಕ್ಕೆ ಪ್ರವೇಶ ನಿಷೇಧ

04:41 PM May 08, 2020 | Suhan S |

ಚಿಕ್ಕಬಳ್ಳಾಪುರ: ಕೋವಿಡ್ 19 ಸೋಂಕು ತಡೆಯುವ ಉದ್ದೇಶದಿಂದ ಘೋಷಣೆಯಾಗಿರುವ ಲಾಕ್‌ಡೌನ್‌ ಪರಿಣಾಮ ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ನಂದಿಗಿರಿ ಧಾಮದ ಸಾರ್ವಜನಿಕರ ಪ್ರವೇಶ ನಿರ್ಬಂಧದ ಆದೇಶವನ್ನು ಜಿಲ್ಲಾಡಳಿತ ಮೇ 17ರ ರವರೆಗೂ ವಿಸ್ತರಿಸಿದೆ.

Advertisement

ಕೇಂದ್ರ ಸರ್ಕಾರ ಕಳೆದ ಮೇ.3 ರ ವರೆಗೂ ಘೊಷಣೆ ಮಾಡಿದ್ದ ಲಾಕ್‌ ಡೌನ್‌ನ್ನು ಮೇ.17ರ ತನಕ ವಿಸ್ತರಿಸಿದ ಕಾರಣ ಜಿಲ್ಲಾಡಳಿತ ಕೋವಿಡ್ 19 ಸೋಂಕು ತಡೆಯುವ ಉದ್ದೇಶದಿಂದ ಸಾಮಾಜಿಕ ಅಂತರ ಕಾಯ್ದಕೊಳ್ಳಲು ಜಿಲ್ಲೆಯ ಪ್ರವಾಸಿ ತಾಣವಾದ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿಷೇಧಹೇರಿದೆ.

ಡೀಸಿ ಆದೇಶದಲ್ಲಿ ಏನಿದೆ?: ಜಿಲ್ಲೆ ಯಲ್ಲಿ ಕೋವಿಡ್ ವೈರೆಸ್‌ (ಕೋವಿಡ್‌ -19) ಸೋಂಕು ಹರುಡುವುದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಕರ್ನಾಟಕ ಸಾಂಕ್ರಾಮಿಕ ರೋಗಗಳು, ಕೋವಿಡ್‌-19 ತಡೆಗಟ್ಟುವ ಸಲುವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರವಾಸಿ ತಾಣವಾದ ನಂದಿ ಗಿರಿದಾಮಕ್ಕೆ ಮೇ 5 ರ ರಾತ್ರಿ 12 ಗಂಟೆ ಯಿಂದ ಮೇ 17 ರ ಮಧ್ಯರಾತ್ರಿ 12 ಗಂಟೆಯವರೆಗೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆರ್‌. ಲತಾ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next