Advertisement
ಅರುಣಾಚಲ ಪ್ರದೇಶ ನಮ್ಮದು. ಮರುನಾಮಕರಣ ಮಾಡುವ ಕಾನೂನಾತ್ಮಕ ಹಕ್ಕು ನಾವು ಹೊಂದಿದ್ದೇವೆ ಎಂದು ಹೇಳಿಕೊಂಡಿದೆ. ಈ ಮೂಲಕ ದಕ್ಷಿಣ ಟಿಬೆಟ್ ನಮ್ಮದು ಎನ್ನುವುದನ್ನು ಚೀನಾ ಮತ್ತೂಮ್ಮೆ ಪ್ರತಿಪಾದಿಸಿದೆ. ಜತೆಗೆ ಶೀಘ್ರದಲ್ಲಿಯೇ ಅರುಣಾಚಲ ಪ್ರದೇಶದ ಇನ್ನೂ ಹೆಚ್ಚಿನ ಸ್ಥಳಗಳಿಗೆ ತಮ್ಮದೇ ಹೆಸರುಗಳನ್ನು ಇರಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
Related Articles
Advertisement
ಭಾರತ ಸಂಪರ್ಕ ಸೇತುವಾಗಲಿ: ಲಿಯೂ ಇಷ್ಟೆಲ್ಲಾ ಕ್ಯಾತೆ, ತರ್ಲೆಯ ನಡುವೆಯೂ ಚೀನಾ ಶುಕ್ರವಾರ ಭಾರತದೊಂದಿಗಿನ ಸೌಹಾರ್ದತೆಯ ಬಗ್ಗೆ ಸೊಲ್ಲೆತ್ತಿದೆ. ಯುರೋಪ್ ಜತೆಗಿನ ಏಷ್ಯಾ ರಾಷ್ಟ್ರಗಳ ಸಂಪರ್ಕ ಸಾಧನೆಗೆ ಭಾರತ ಮಹತ್ವದ ಸೇತುವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಹೇಳಿರುವ ಚೀನಾ ರಾಯಭಾರಿ ಕಚೇರಿ ಸಚಿವ ಲಿಯೂ ಜಿನ್ಸಾಂಗ್, “ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಒಂದು ತಡೆಯಾಗಿ ಪರಿಣಮಿಸಿದೆ. ಇದು ಪರಿಹಾರಗೊಳ್ಳಬೇಕಿದೆ ಎಂದಿದ್ದಾರೆ. ಅಲ್ಲದೆ, ಭಾರತ ಪ್ರಮುಖ ಮಿತ್ರ ರಾಷ್ಟ್ರಗಳಲ್ಲಿ ಒಂದಾಗಿದೆ. ಇಂದು, ಮುಂದು, ಎಂದೆಂದೂ ಈ ಬಾಂಧವ್ಯ ಕಾಯ್ದುಕೊಂಡು ಹೋಗಬೇಕಿದೆ. ಯಾವುದೇ ಅಂಜಿಕೆ ಇಲ್ಲದೇ ಒಕ್ಕೂಟ ವ್ಯವಸ್ಥೆಯ ಚೀನಾದ ಆಹ್ವಾನಕ್ಕೆ ಭಾರತ ಕೈಜೋಡಿಸಬೇಕಿದೆ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ನಿರ್ಮಾಣ ಹಿನ್ನೆಲೆಯಲ್ಲಿ ಭಾರತ ಇದಕ್ಕೆ ಹಿಂದೇಟು ಹಾಕಬಾರದು ಎಂದಿದ್ದಾರೆ.