Advertisement

ಮಂಗಳೂರು: ಬಿಜೆಪಿ ವಿಜಯೋತ್ಸವ ಮೆರವಣಿಗೆ

10:51 AM Jun 02, 2019 | Team Udayavani |

ಮಂಗಳೂರು: ಲೋಕಸಭಾ ಚುನಾವಣೆಯಲ್ಲಿ ದ.ಕ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಜಯಭೇರಿ ಭಾರಿಸಿರುವ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ಬಿಜೆಪಿ ವತಿಯಿಂದ ವಿಜಯೋತ್ಸವ ಮೆರವಣಿಗೆಯು ಕುದುಲ್‌ ರಂಗ ರಾವ್‌ ಪುರಭವನದಿಂದ ಪಿವಿಎಸ್‌ನಲ್ಲಿ ರುವ ಬಿಜೆಪಿ ಕಚೇರಿ ವರೆಗೆ ಶನಿವಾರ ನಡೆಯಿತು.

Advertisement

ಮೆರವಣಿಗೆಯು ಪುರಭವನದಿಂದ ಹೊರಟು ಕ್ಲಾಕ್‌ ಟವರ್‌, ಜಿಎಚ್‌ಎಸ್‌ ರೋಡ್‌, ಟೆಂಪಲ್‌ ಸ್ಕ್ವೇರ್‌, ಬಾಲಾಜಿ ಟಾಕೀಸ್‌, ನ್ಯೂಚಿತ್ರಾ ಟಾಕೀಸ್‌, ಅಳಕೆ, ದುರ್ಗಾ ಮಹಲ್‌, ಬಲ್ಲಾಳ್‌ಬಾಗ್‌, ಎಂ.ಜಿ. ರೋಡ್‌, ಪಿವಿಎಸ್‌ ವೃತ್ತ ಮುಖಾಂತರ ಬಿಜೆಪಿ ಕಚೇರಿ ವರೆಗೆ ಸಾಗಿಬಂದಿತು.

ಸುಮಾರು 10ಕ್ಕೂ ಹೆಚ್ಚು ತೆರೆದ ಜೀಪ್‌ಗ್ಳು, 50ಕ್ಕೂ ಹೆಚ್ಚು ಬೈಕ್‌ಗಳಲ್ಲಿ ಬಿಜೆಪಿ ಧ್ವಜ ಹಿಡಿದು ಬಿಜೆಪಿ ಕಾರ್ಯಕರ್ತರು ಮತ್ತು ನಳಿನ್‌ ಅಭಿಮಾನಿಗಳು ಪಾಲ್ಗೊಂಡರು. ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ತುಣುಕುಗಳು ಮೆರವಣಿಗೆಯುದ್ದಕ್ಕೂ ಕೇಳಿ ಬಂದವು.

ಮಹಿಳೆಯೋರ್ವರು ತೆರೆದ ಜೀಪನ್ನು ಮುನ್ನಡೆಸಿರುವುದು ವಿಶೇಷವಾಗಿತ್ತು. ಒಂದು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಶಾಸಕ ಡಿ. ವೇದವ್ಯಾಸ ಕಾಮತ್‌, ಮಾಜಿ ಶಾಸಕ ಯೋಗೀಶ್‌ ಭಟ್‌, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಿಶೋರ್‌ ರೈ, ಉಪಾಧ್ಯಕ್ಷ ರವಿಶಂಕರ್‌ ಮಿಜಾರ್‌, ಬಿಜೆಪಿ ಮುಖಂಡರಾದ ನಿತಿನ್‌ ಕುಮಾರ್‌, ಹರಿಕೃಷ್ಣ ಬಂಟ್ವಾಳ,
ಜಗದೀಶ್‌ ಅಧಿಕಾರಿ, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next