Advertisement

ಸಿದ್ದರಾಮಯ್ಯ ಅಧಿಕಾರದಲ್ಲಿದ್ದರೆ ಎತ್ತುಗಳೆಲ್ಲವೂ ಕಸಾಯಿಖಾನೆ ಸೇರುತ್ತಿದ್ದವು: ನಳಿನ್ ಕಟೀಲ್

04:40 PM Sep 19, 2021 | Team Udayavani |

ದಾವಣಗೆರೆ: ಕಾಂಗ್ರೆಸ್‌ನವರು ಬೆಲೆ ಏರಿಕೆ ವಿರುದ್ಧ ಎತ್ತಿನಬಂಡಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ಸಿದ್ದರಾಮಯ್ಯ ಏನಾದರೂ ಅಧಿಕಾರದಲ್ಲಿ ಇದ್ದಿದ್ದರೆ ಕಾಂಗ್ರೆಸ್‌ನವರಿಗೆ ಪ್ರತಿಭಟನೆ ಮಾಡಲಿಕ್ಕೂ ಎತ್ತುಗಳೇ ಸಿಗುತ್ತಿರಲಿಲ್ಲ. ಎಲ್ಲವೂ ಕಸಾಯಿಖಾನೆಗಳಿಗೆ ಸೇರುತ್ತಿದ್ದವು ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್ ಕಟೀಲ್ ಲೇವಡಿ ಮಾಡಿದರು.

Advertisement

ದಾವಣಗೆರೆಯ ತ್ರಿಶೂಲ್ ಕಲಾಭವನದಲ್ಲಿ ನಡೆದ ಬಿಜೆಪಿ ರಾಜ್ಯ ಕಾರ್‍ಯಕಾರಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಿಂದೂ ದೇವಾಲಯಗಳನ್ನ ಧ್ವಂಸ ಮಾಡಿದ ಟಿಪ್ಪು ಜಯಂತಿ ಮಾಡಿದ, ವೀರಶೈವ- ಲಿಂಗಾಯತರು ಎಂದು ಲಿಂಗಾಯತ ಸಮಾಜವನ್ನ ಒಡೆಯುವ ಪ್ರಯತ್ನ ಮಾಡಿದ, 24 ಹಿಂದೂ ಕಾರ್‍ಯಕರ್ತರ ಹತ್ಯೆ ನಡೆದಾಗ ಕಣ್ಣೀರು ಹಾಕದೇ ಇದ್ದಂತಹ ಸಿದ್ದರಾಮಣ್ಣನಿಗೆ ಹಿಂದೂ ಧರ್ಮದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ ಎಂದು ದೂರಿದರು.

ಇದನ್ನೂ ಓದಿ:‘ಸಿಧು ದೇಶ ವಿರೋಧಿ’ : ಅಮರೀಂದರ್ ಆರೋಪಕ್ಕೆ ‘ಗಾಂಧಿ ಕುಟುಂಬ’ದ ಮೌನವೇಕೆ ?

ನಂಜನಗೂಡು ತಾಲೂಕಿನಲ್ಲಿ ಅಧಿಕಾರಿಗಳ ತಪ್ಪಿನ ಕಾರಣದಿಂದ ಹಿಂದೂ ದೇವಾಲಯ ಕೆಡವಲಾಗಿದೆ. ಸಂಬಂಧಿತ ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ. ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ದೇವಸ್ಥಾನ, ಮಂದಿರ ನಾಶ ಮಾಡುವುದಕ್ಕೆ ಬಿಡುವುದೇ ಇಲ್ಲ. ನಂಜನಗೂಡು ಘಟನೆಯಿಂದ ನೋವಾಗಿದೆ. ಜನರ ಭಾವನೆಗೆ ತಕ್ಕದಾಗಿ ದೇವಸ್ಥಾನ ಕಟ್ಟಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next