Advertisement

ಸಿದ್ದು ,ಡಿಕೆಶಿಗೆ 20 ವರ್ಷ ಸಿಎಂ ಹುದ್ದೆ ಸಿಗದು: ನಳಿನ್‌

12:53 AM Sep 13, 2021 | Team Udayavani |

ಕಟಪಾಡಿ: ಸಿದ್ದ ರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರು ಮುಖ್ಯಮಂತ್ರಿ  ಕುರ್ಚಿಗೆ ಈಗಲೇ ಹಾತೊರೊಯುತ್ತಿದ್ದಾರೆ. ಆದರೆ ಇನ್ನು 20 ವರ್ಷ ಖಂಡಿತವಾಗಿಯೂ ಅವರು ಆ ಕುರ್ಚಿ ಏರುವುದಿಲ್ಲ. ಬಿಜೆಪಿಯೇ ಮುಂದಿನ ಚುನಾವಣೆಯಲ್ಲಿಯೂ ರಾಜ್ಯ ದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಅವರು ರವಿವಾರ ಉಡುಪಿ ಜಿಲ್ಲೆಯ ಕಾಪು ವಿಧಾನ ಸಭಾ ಕ್ಷೇತ್ರದ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದರು. ಕಾಂಗ್ರೆಸ್‌ ಕೋಟೆಗಳು ಛಿದ್ರ ಪ್ರಧಾನಮಂತ್ರಿ ಮೋದಿ ಅವರ ಅದ್ಭುತವಾದ ಯೋಚನೆ ಮತ್ತು ಯೋಜನೆಯ ಆಡಳಿತದಿಂದ ಭಾರತವು ಪ್ರಗತಿಯತ್ತ ದಾಪುಗಾಲಿಡುತ್ತಿದೆ. ಬೆಳಗಾವಿ ಯಲ್ಲಿ ಬಿಜೆಪಿ ಯನ್ನು ಮತದಾರರು ಗೆಲ್ಲಿಸಿದ್ದಾರೆ. ಮಲ್ಲಿ ಕಾರ್ಜುನ ಖರ್ಗೆ ಅವರ ಗುಲ್ಬರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಭದ್ರ ಕೋಟೆ ಛಿದ್ರ ವಾಗಿ ಅಲ್ಲಿ ಕಮಲ ಅರಳಿದೆ. ಇಡೀ ರಾಜ್ಯ ದಲ್ಲಿ ಭಾರತೀಯ ಜನತಾ ಪಾರ್ಟಿಯ ವಾತಾವರಣ ಇದೆ ಎಂದರು.

ಶಾಸಕರೆಲ್ಲರೂ ಬಿಜೆಪಿಯ ಬೂತ್‌ ಅಧ್ಯಕ್ಷರಿಗೆ ವಿಶ್ವಾಸ ತುಂಬುವ, ಬೆಂಬಲಿ ಸುವ ಕೆಲಸ ಮಾಡಿದಲ್ಲಿ ಬಿಜೆಪಿ ಮತ್ತಷ್ಟು ಸದೃಢಗೊಳ್ಳಲಿದೆ. ಮತ ಗಟ್ಟೆಯ ಅಧ್ಯಕ್ಷ ರನ್ನು ಸಶಕ್ತಗೊಳಿಸುವ ಯೋಜನೆ ಚುನಾ

ವಣೆಯ ತಂತ್ರಗಾರಿಕೆಯೇ ಆಗಿದೆ. ಮುಂಬರುವ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಚುನಾವಣೆ ಗಳಲ್ಲೂ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next