Advertisement

ನಾಲತವಾಡ: ಬೃಹತ್‌ ಮೊಸಳೆ ಪ್ರತ್ಯಕ್ಷ; ಭಯಭೀತರಾದ ಸ್ಥಳೀಯರು

05:36 PM Oct 30, 2022 | Team Udayavani |

ಮುದ್ದೇಬಿಹಾಳ : ಬೃಹತ್ ಮೊಸಳೆ ಪ್ರತ್ಯಕ್ಷವಾಗಿ ಆತಂಕ ಮೂಡಿಸಿದ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಹತ್ತಿರದ ಹಳೆಯ ಸಿಂಡಿಕೇಟ್ ಬ್ಯಾಂಕ್ ಹಿಂದೆ ನಡೆದಿದೆ.

Advertisement

ಸ್ಥಾವರಮಠ ಎಂಬುವರ ಹಾಳು ಬಾವಿಯಲ್ಲಿ ಮೊಸಳೆ ಪ್ರತ್ಯಕವಾಗಿದ್ದು, ದೈತ್ಯ ಮೊಸಳೆಯನ್ನು ಕಂಡು ಸ್ಥಳೀಯರು ಭಯಭೀತರಾಗಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಮೊಸಳೆ ಹಿಡಿದು ಬೇರೆಡೆಗೆ ಸ್ಥಳಾಂತರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next