Advertisement

ನಾಗೂರು : ಹಾರ್ಡ್‌ವೇರ್‌ ಅಂಗಡಿಗೆ ಬೆಂಕಿ ; ಲಕ್ಷಾಂತರ ರೂ. ನಷ್ಟ

07:53 PM Mar 12, 2023 | Team Udayavani |

ಕುಂದಾಪುರ: ಹಾರ್ಡ್‌ವೇರ್‌ ಅಂಗಡಿಯಲ್ಲಿ ಶಾರ್ಟ್‌ ಸರ್ಕ್ನೂಟ್‌ನಿಂದ ಬೆಂಕಿ ಕಾಣಿಸಿಕೊಂಡು, ಅಂಗಡಿಯಲ್ಲಿದ್ದ ಸಾಮಾಗ್ರಿಗಳೆಲ್ಲ ಬೆಂಕಿಗೆ ಆಹುತಿಯಾದ ಪರಿಣಾಮ ಲಕ್ಷಾಂತರ ರೂ. ನಷ್ಟ ಉಂಟಾದ ಘಟನೆ ರವಿವಾರ ಮಧ್ಯಾಹ್ನ ಬೈಂದೂರು – ಕುಂದಾಪುರ ರಾಷ್ಟಿÅàಯ ಹೆದ್ದಾರಿ 66 ರ ಸಮೀಪದ ನಾಗೂರಲ್ಲಿ ಸಂಭವಿಸಿದೆ.
ನಾಗೂರಿನ ಮಸೀದಿ ಬಳಿಯಿರುವ ಕಾಂಪ್ಲೆಕ್ಸ್‌ನಲ್ಲಿದ್ದ ರವಿರಾಜ್‌ ಹೆಗ್ಡೆ ಎಂಬುವರ ಹಾರ್ಡ್‌ವೇರ್‌ ಅಂಗಡಿಯಲ್ಲಿ ಶಾರ್ಟ್‌ ಸರ್ಕ್ನೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ರವಿವಾರವಾಗಿದ್ದರಿಂದ ಮಧ್ಯಾಹ್ನದವರೆಗೆ ಅಂಗಡಿ ತೆರೆದಿದ್ದು, ಬಳಿಕ ಬಂದ್‌ ಮಾಡಿ ಮನೆಗೆ ತೆರಳಿದ್ದರು. ಸುಮಾರು 2 ರಿಂದ 3 ಗಂಟೆಯ ಮಧ್ಯದ ಅವಧಿಯಲ್ಲಿ ಅಂಗಡಿಯೊಳಗೆ ಬೆಂಕಿ ಕಾಣಿಸಿಕೊಂಡಿದೆ.

Advertisement

ನೋಡ ನೋಡುತ್ತಿದ್ದಂತೆ ಅಂಗಡಿಯೊಳಗಿದ್ದ ಪೈಪ್‌ಗ್ಳು ಸಹಿತ ಅನೇಕ ಸಾಮಾಗ್ರಿಗಳು ಹೊತ್ತಿ ಉರಿದಿದೆ. ಕೂಡಲೇ ಸ್ಥಳೀಯರೆಲ್ಲ ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಬೈಂದೂರು ಅಗ್ನಿ ಶಾಮಕ ದಳದ ಸಿಬಂದಿ ಆಗಮಿಸಿ, ಬೆಂಕಿ ನಂದಿಸುವ ಕಾರ್ಯ ಕೈಗೊಂಡರು.
ಸುಮಾರು 30 ಲಕ್ಷ ರೂ. ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next