Advertisement

ಸಾಲ ಬಾಧೆ: ಕುಟುಂಬ ಸಹಿತ ಕಾರಿನೊಳಗೆ ಬೆಂಕಿ ಹಚ್ಚಿಕೊಂಡ ಉದ್ಯಮಿ; ಪತ್ನಿ, ಪುತ್ರ ಚಿಂತಾಜನಕ

11:58 AM Jul 20, 2022 | Team Udayavani |

ನಾಗ್ಪುರ್: ಸಾಲದ ಹೊರೆ ತಾಳಲಾರದೆ ಉದ್ಯಮಿ ಹಾಗೂ ತನ್ನ ಕುಟುಂಬದ ಸದಸ್ಯರೊಂದಿಗೆ ಕಾರಿನೊಳಗೆ ಬೆಂಕಿ ಹಚ್ಚಿಕೊಂಡಿರುವ ಘಟನೆ ನಾಗ್ಪುರ್ ನಲ್ಲಿ ನಡೆದಿದೆ. ಘಟನೆಯಲ್ಲಿ ಉದ್ಯಮಿ ಸಾವನ್ನಪ್ಪಿದ್ದು, ಪತ್ನಿ ಮತ್ತು ಮಗ ಬದುಕುಳಿದಿದ್ದು, ತೀವ್ರ ಸುಟ್ಟ ಗಾಯಗಳಿಂದ ಚಿಂತಾಜನಕ ಸ್ಥಿತಿಯಲ್ಲಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಕಾಂಗ್ರೆಸ್‌ ನಲ್ಲಿ ಡಿಕೆಶಿ ಒಂದು ತೀರ, ಸಿದ್ದರಾಮಯ್ಯ ಇನ್ನೊಂದು ತೀರ: ಸಿಎಂ ವ್ಯಂಗ್ಯ

ಭೀಕರ ಘಟನೆಯ ವಿಡಿಯೋ ಜನರನ್ನು ಬೆಚ್ಚಿಬೀಳಿಸಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿರುವ ದೃಶ್ಯ ದಾಖಲಾಗಿದೆ.

ಏನಿದು ಘಟನೆ:

ರಾಮ್ ರಾಜ್ ಭಟ್ (58ವರ್ಷ) ಅವರು ಪತ್ನಿ ಮತ್ತು ಮಗನೊಂದಿಗೆ ಊಟದ ನೆಪದಲ್ಲಿ ಹೋಟೆಲ್ ಗೆ ಕರೆದೊಯ್ಯುತ್ತಿದ್ದರು. ಆದರೆ ಹೋಟೆಲ್ ತಲುಪುವ ಮುನ್ನವೇ ಮಾರ್ಗದಲ್ಲಿ ದಿಢೀರನೇ ಕಾರನ್ನು ನಿಲ್ಲಿಸಿ, ತನ್ನ ಹಾಗೂ ಪತ್ನಿ, ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಗಂಭೀರವಾಗಿ ಸುಟ್ಟ ಗಾಯದಿಂದ ರಾಮ್ ರಾಜ್ ಭಟ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆದರೆ ಪತ್ನಿ ಸಂಗೀತಾ ಭಟ್ (57ವರ್ಷ) ಮತ್ತು ಪುತ್ರ ನಂದನ್ (25ವರ್ಷ) ಕಾರಿನ ಡೋರ್ ತೆಗೆದು ಹೊರಗೆ ಹಾರಿದ್ದರು. ಇಬ್ಬರೂ ತೀವ್ರವಾಗಿ ಸುಟ್ಟು ಹೋಗಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವುದಾಗಿ ವರದಿ ಹೇಳಿದೆ.

ಸುಟ್ಟು ಹೋದ ಕಾರಿನೊಳಗೆ ಪ್ಲ್ಯಾಸ್ಟಿಕ್ ಬ್ಯಾಗ್ ಸಿಕ್ಕಿದ್ದು, ಅದರಲ್ಲಿರುವ ನೋಟ್ಸ್ ನಲ್ಲಿ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಉಲ್ಲೇಖಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next