Advertisement

ದಾಂಪತ್ಯ ಕಲಹ : ನಟ ನಾಗಚೈತನ್ಯಗೆ ಕಾಡುತ್ತಿದೆಯಂತೆ ಆ ಭಯ

02:25 PM Sep 15, 2021 | Team Udayavani |

ಹೈದರಾಬಾದ್ : ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ಅವರ ದಾಂಪತ್ಯ ಕಲಹ ಕಳೆದ ಕೆಲ ದಿನಗಳಿಂದ ಟಾಕ್ ಆಫ್‍ ದಿ ಟೌನ್ ಆಗಿದೆ. ಈ ಜೋಡಿ ವಿಚ್ಛೇದನ ತೆಗೆದುಕೊಳ್ಳಲಿದ್ದಾರೆ ಎನ್ನುವ ವದಂತಿ ಕೇಳಿ ಬರುತ್ತಿದ್ದರೂ ಇವರ ಕುಟುಂಬದವರು ಇದರ ಬಗ್ಗೆ ತುಟಿ ಪಿಟಕ್ ಅಂದಿಲ್ಲ. ಇದೀಗ ಹೊಸ ವಿಚಾರ ಏನಂದರೆ ಸಮಂತಾ ಹಾಗೂ ಡಿವೋರ್ಸ್ ವಿಷಯದ ಬಗ್ಗೆ ಮಾಧ್ಯಮಗಳಿಂದ ಎದುರಾಗಬಹುದಾದ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ನಾಗಚೈತನ್ಯ ಮುಂದಾಗಿದ್ದಾರೆ.

Advertisement

ನಾಗ ಚೈತನ್ಯ ನಟಿಸಿರುವ ‘ಲವ್ ಸ್ಟೋರಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಪ್ರಮೋಷನ್ ಕಾರ್ಯ ಚಿತ್ರತಂಡದಿಂದ ಭರದಿಂದ ಸಾಗಿದೆ. ಚಿತ್ರದ ನಾಯಕ ಚೈತನ್ಯ ಕೂಡ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಮಾಧ್ಯಮಗಳ ಎದುರು ಅವರು ಹಾಜರಾಗುತ್ತಿಲ್ಲ. ಇದಕ್ಕೆ ಕಾರಣ ತನ್ನ ಹಾಗೂ ಪತ್ನಿ ಸಮಂತಾ ಕುರಿತು ಪ್ರಶ್ನೆಗಳು ಎದುರಾಗಬಹುದೆನ್ನುವ ಭಯವಂತೆ.

ಮಾಧ್ಯಮಗಳ ಎದುರು ಫ್ಯಾಮಿಲಿ ಮ್ಯಾಟರ್ ಮಾತಾಡಬಾರದು ಎನ್ನುವ ಯೋಚನೆಯಲ್ಲಿದ್ದಾರಂತೆ ಈ ನಟ. ಆದರೂ ಸಿನಿಮಾ ಪ್ರಮೋಷನ್‍ಗಾಗಿ ಮಾಧ್ಯಮಗಳ ಎದುರು ಅವರು ಹಾಜರಾಗಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.

ಲವ್ ಸ್ಟೋರಿ ಪ್ರಮೋಷನ್‍ಗಾಗಿ ಮಾಧ್ಯಮಗಳ ಎದುರು ಕಾಣಿಸಿಕೊಳ್ಳುತ್ತಿರುವ ನಾಗ ಚೈತನ್ಯ ತಮ್ಮ ಚಿತ್ರತಂಡ ಹಾಗೂ ಪಿಆರ್‍ ಗಳಿಗೆ ಮೊದಲೆ ತಾಕಿತ್ತು ಮಾಡಿದ್ದಾರಂತೆ. ಯಾವುದೇ ಕಾರಣಕ್ಕೂ ಮಾಧ್ಯಮಗಳು ಸಮಂತಾ ಹಾಗೂ ಡಿವೋರ್ಸ್ ಬಗ್ಗೆ ಪ್ರಶ್ನೆಗಳನ್ನು ಕೇಳದಂತೆ ನೋಡಿಕೊಳ್ಳಿ ಎಂದು ಕಂಡಿಷನ್ ಹಾಕಿದ್ದಾರಂತೆ.

ಇನ್ನು ಸಮಂತಾ ಅಕ್ಕೀನೆನಿ ಹೆಸರು ಕೈ ಬಿಟ್ಟಾಗಿನಿಂದ ಇವರ ದಾಂಪತ್ಯದಲ್ಲಿ ಎಲ್ಲವೂ ಸರಿ ಇಲ್ಲ ಅನುಮಾನ ಹೊಗೆಯಾಡಲು ಶುರುವಾಯಿತು. ಇತ್ತೀಚಿಗೆ ಈ ಜೋಡಿ ಜೊತೆಯಾಗಿ ಕಾಣಿಸಿಕೊಳ್ಳದಿರುವುದು ಕೂಡ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next