Advertisement

ಪೆನ್‌ಡ್ರೈವ್ ಪ್ರಕರಣ ಮೇಲ್ಮನೆ ಚುನಾವಣೆ ಮೇಲೆ ಪರಿಣಾಮ ಬೀರಲಿದೆ: ಎನ್‌.ಚಲುವರಾಯಸ್ವಾಮಿ

07:56 PM May 30, 2024 | |

ಮಂಡ್ಯ: ಪೆನ್‌ಡ್ರೈವ್ ಪ್ರಕರಣ ಇಡೀ ಸಮಾಜವೇ ತಲೆತಗ್ಗಿಸುವ ವಿಚಾರ. ಇದು ಶಿಕ್ಷಕರ ಚುನಾವಣೆಯಾಗಿರುವುದರಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರಿದ್ದಾರೆ. ಇದು ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸಚಿವ ಎನ್‌.ಚಲುವರಾಯಸ್ವಾಮಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಎಸ್‌ಐಟಿ ತನಿಖೆ ನಡೆಯುತ್ತಿದೆ. ಅದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಕುಮಾರಸ್ವಾಮಿ, ಜೆಡಿಎಸ್‌ ಎನ್ನುವವರ ಮಧ್ಯೆ ಮಾತನಾಡುವುದು ಸರಿಯಲ್ಲ. ಕಾನೂನು ಪ್ರಕಾರ ಕ್ರಮ ಆಗಲಿದೆ ಎಂದರು. ಎಚ್‌.ಡಿ.ಕುಮಾರಸ್ವಾಮಿ ಯಾವ ವ್ಯಕ್ತಿಯ ಮೇಲೆ ಅನುಮಾನ ಪಟ್ಟಿಲ್ಲ?  ಎಲ್ಲ ವ್ಯಕ್ತಿಗಳ ಮೇಲೂ ಅನುಮಾನಪಡುತ್ತಾರೆ. ಅದೇರೀತಿ ಎಸ್‌ಐಟಿ ತನಿಖೆ ಮೇಲೂ ಅನುಮಾನ ಪಡುತ್ತಿದ್ದಾರೆ. ಬಿಜೆಪಿ, ಆರ್‌ಎಸ್‌ಎಸ್‌ ಬಗ್ಗೆ ಎಷ್ಟು ವಿರೋಧವಾಗಿ ಮಾತನಾಡಿದ್ದರು ಎಂಬುದು ನಿಮಗೂ ಗೊತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next