Advertisement

ಮೊದಲ ಪತ್ನಿಯನ್ನು ಕೊಂದು ಜೈಲಿಗೆ ಹೋಗಿ ಬಂದವ 2ನೇ ಮದುವೆಯಾಗಿ ಅವಳನ್ನೂ ಕೊಂದೇ ಬಿಟ್ಟ

12:00 PM Dec 02, 2021 | Team Udayavani |

ಮೈಸೂರು : ಮೊದಲ ಪತ್ನಿಯನ್ನು ಕೊಂದು ಸೆರೆಮನೆ ವಾಸ ಮುಗಿಸಿ ಬಂದವ ಎರಡನೇ ಮದುವೆಯಾಗಿ ಈಗ ಅವಳನ್ನೂ ಮಾರಾಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದು ಇದನ್ನು ತಡೆಯಲು ಬಂದ ಅತ್ತೆ ಮಾವ ಸೇರಿ ನಾಲ್ವರ ಮೇಲೆ ದಾಳಿ ನಡೆಸಿದ ಘಟನೆ ನಂಜನಗೂಡು ತಾಲೂಕಿನ ನವಿಲೂರು ಗ್ರಾಮದಲ್ಲಿ ನಡೆದಿದೆ.

Advertisement

ನಿಂಗವ್ವ ಮೃತ ದುರ್ದೈವಿ, ಈರಯ್ಯ ಎಬುವವನೇ ಕೊಲೆ ಆರೋಪಿ, ಈತ ಈ ಹಿಂದೆ ತನ್ನ ಮೊದಲ ಪತ್ನಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈಲು ಸೇರಿದ್ದ ಬಳಿಕ ಹೊರ ಬಂದವ ನಿಂಗವ್ವಳನ್ನು ಎರಡನೇ ಮದುವೆಯಾದ. ಆದರೆ ಅದೇನಾಗಿತ್ತೋ ಗೊತ್ತಿಲ್ಲ ಎರಡನೇ ಪತ್ನಿಯನ್ನೂ ಮಾರಾಕಾಸ್ತ್ರದಿಂದ ಕೊಚ್ಚಿ ಕೊಲೆಮಾಡಿದ್ದಾನೆ ಈ ವೇಳೆ ನಿಂಗವ್ವ ಅವರ ತಾಯಿ, ತಂದೆ, ಮತ್ತಿಬ್ಬರು ಹಲ್ಲೆ ನಡೆಸುವುದನ್ನು ತಡೆಯಲು ಬಂದಿದ್ದಾರೆ ಆದರೆ ಈರಯ್ಯ ಅವರ ಮೇಲೂ ಮಾರಾಕಾಸ್ತ್ರದಿಂದ ದಾಳಿ ಮಾಡಿದ್ದಾನೆ, ಪರಿಣಾಮ ನಾಲ್ವರೂ ಗಂಭೀರ ಗಾಯಗೊಂಡಿದ್ದು ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿಂಗವ್ವಳ ತಂದೆ, ತಾಯಿ ಸ್ಥಿತಿ ಗಂಭೀರವಾಗಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಈರಯ್ಯನನ್ನು ವಶಕ್ಕೆ ಪಡೆದಿದ್ದಾರೆ.

ಮೂಲಗಳ ಪ್ರಕಾರ ಎರಡನೇ ಹೆಂಡತಿಯ ಅನೈತಿಕ ಸಂಬಂಧವೇ ಘಟನೆಗೆ ಕಾರಣ ಎನ್ನಲಾಗಿದೆ…

ಇದನ್ನೂ ಓದಿ : 2024 ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 300 ಸ್ಥಾನಗಳಲ್ಲಿ ಜಯಗಳಿಸುವುದು ಕಷ್ಟ: ಗುಲಾಂ ನಬಿ

Advertisement
Advertisement

Udayavani is now on Telegram. Click here to join our channel and stay updated with the latest news.

Next