Advertisement

ಇಂದಿನಿಂದ ಗಜಪಡೆಗೆ ಭಾರ ಹೊರುವ ತಾಲೀಮು

02:48 PM Sep 20, 2021 | Team Udayavani |

ಮೈಸೂರು: ನಾಡಹಬ್ಬ ದಸರಾ ಉತ್ಸವದಲ್ಲಿಭಾಗವಹಿಸಲು ಅರಮನೆ ಆವರಣದಲ್ಲಿಬೀಡುಬಿಟ್ಟಿರುವ ಅಭಿಮನ್ಯು ನೇತೃತ್ವದ ಗಜಪಡೆಗೆಸೋಮವಾರದಿಂದ ಭಾರ ಹೊರಿಸುವ ತಾಲೀಮುಆರಂಭವಾಗಲಿದ್ದು, ಬೆಳಗ್ಗೆ 11.30ಕ್ಕೆ ಆನೆಗಳಮೇಲಿಡುವ ಗಾದಿ ಮತ್ತು ನಮಾªಗೆ ಪೂಜೆ ಸಲ್ಲಿಸಿತಾಲೀಮಿಗೆ ಚಾಲನೆ ನೀಡಲಾಗುತ್ತದೆ.

Advertisement

ಸೆ.16ರಂದು ಅರಮನೆಗೆ ಪ್ರವೇಶಿಸಿದ ಗಜಪಡೆಗೆಕಳೆದ 5 ದಿನಗಳಿಂದ ಪೌಷ್ಟಿಕ ಆಹಾರ ನೀಡಲಾಗುತ್ತಿದ್ದು, ಜಂಬೂ ಸವಾರಿಗೆ ಅಣಿಗೊಳಿಸಲಾಗುತ್ತಿದೆ. ಜತೆಗೆ 2 ದಿನದಿಂದ ಬೆಳಗ್ಗೆ3.5 ಕಿ.ಮೀ.ಹಾಗೂ ಸಂಜೆ 3.5ಕಿ.ಮೀ. ಸೇರಿದಂತೆ ದಿನಕ್ಕೆ 7ಕಿ.ಮೀ.ನಷ್ಟು ದೂರದನಡಿಗೆ ನಡೆಸಲಾಗುತ್ತಿತ್ತು.ಜಂಬೂ ಸವಾರಿಗೆ28 ದಿನ ಮಾತ್ರವಿರುವುದರಿಂದ ಇದೀಗಗಜಪಡೆಗೆ ಭಾರಹೊರಿಸುವ ತಾಲೀಮುನಡೆಸಲು ನಿರ್ಧರಿಸಲಾಗಿದೆ.

ಜಂಬೂ ಸವಾರಿಯಂತೆ ಮೆರವಣಿಗೆ: ನಾಳೆಯಿಂದಆರಂಭವಾಗಲಿರುವ ತಾಲೀಮುಜಂಬೂ ಸವಾರಿ ನಡೆಯುವ ಮಾರ್ಗದಲ್ಲಿತಾಲೀಮು ನಡೆಸಲಾಗುತ್ತದೆ. ನಾಳೆ ಕೋಡಿಸೋಮೇಶ್ವರ ದೇವಾಲಯದಿಂದ ಆನೆಗಳನ್ನುಅಂಬಾರಿ ಕಟ್ಟುವ ಕ್ರೇನ್‌ ಇರುವ ಸ್ಥಳಕ್ಕೆ ಕರೆದೊಯ್ದಬಳಿಕ ಅರಮನೆಮುಂಭಾಗಕ್ಕೆ ಆನೆಗಳನ್ನು ಸಾಲಾಗಿ ಕರೆತರಲಾಗುತ್ತದೆ.

ಅಲ್ಲದೆ ಕುಮ್ಕಿಆನೆಗಳಾದ ಚೈತ್ರ ಹಾಗೂಕಾವೇರಿಯೊಂದಿಗೆ ಭಾರ ಹೊತ್ತಅಭಿಮನ್ಯು ಜಂಬೂಸವಾರಿ ದಿನ ಪುಷ್ಪಾರ್ಚನೆಮಾಡುವ ಸ್ಥಳದಲ್ಲಿ ಜನರಲ್‌ ಸೆಲ್ಯೂಟ್‌ ನೀಡಿಅರಮನೆ ಆವರಣದಲ್ಲಿ 3 ಸುತ್ತು ಸಂಚರಿಸಲಿದೆ.ಸೋಮವಾರದಿಂದಲೇ ಭಾರ ಹೊರುವ ತಾಲೀಮುಆರಂಭವಾಗುತ್ತಿರುವುದರಿಂದ ಸಣ್ಣ ಪ್ರಮಾಣದತೂಕವನ್ನಷ್ಟೇ ಹೊರಿಸಲಾಗುತ್ತದೆ.

ನಂತರ ದಿನದಿಂದದಿನಕ್ಕೆ ಬಾರದ ಪ್ರಮಾಣ ಹೆಚ್ಚಿಸಲಾಗುತ್ತದೆ.ಎಲ್ಲಾ ಆನೆಗಳಿಗೂ ತಾಲೀಮು: ಈ ಬಾರಿಯದಸರಾ ಉತ್ಸವಕ್ಕೆ ಆಗಮಿಸಿರುವ ಆನೆಗಳಾದಅಭಿಮನ್ಯು, ಗೋಪಾಲಸ್ವಾಮಿ, ಧನಂಜಯಹಾಗೂ ಇದೇ ಮೊದಲ ಬಾರಿಗೆ ಬಂದಿರುವಅಶ್ವತ್ಥಾಮನಿಗೂ ಭಾರ ಹೊರಿಸುವ ತಾಲೀಮುನಡೆಸಲು ಅರಣ್ಯಾಧಿಕಾರಿಗಳು ತಯಾರಿನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next