Advertisement

ದೃಷ್ಟಿ ವಿಶೇಷ ಚೇತನೆಗೆ ಚಿನ್ನದ ಪದಕ : ಪರಿಶ್ರಮಕ್ಕೆ ಸಂದ ಪ್ರತಿಫಲ

05:05 PM Sep 07, 2021 | Team Udayavani |

ಮೈಸೂರು :  ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಅಂಡಿತವಳ್ಳಿ ಗ್ರಾಮದ ದೃಷ್ಟಿ ವಿಶೇಷ ಚೇತನೆ ಲತಾ ಎಚ್.ಎನ್. ಅವರು ಎಂಎ ಕನ್ನಡದ ವಿಷಯದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

Advertisement

ಮೂಲತಃ ಕೃಷಿಕರಾದ ನಾಗರಾಜು, ರಾಧಾ ದಂಪತಿ ಪುತ್ರಿಯಾದ ಲತಾ ಅವರು ಬಾಲ್ಯದಲ್ಲೇ ದೃಷ್ಟಿ ಕಳೆದುಕೊಂಡರು. ಮಹಾರಾಣಿ ಕಾಲೇಜಿನಲ್ಲಿ ಬಿಎ ಮುಗಿಸಿ ನಂತರ ಮಾನಸಗಂಗೋತ್ರಿಯಲ್ಲಿ ಎಂಎ ಕನ್ನಡಕ್ಕೆ ಸೇರಿಕೊಂಡ ಇವರು ಛಲ ಬಿಡದೆ ಓದಿ ಇದೀಗ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

ಇದನ್ನೂ ಓದಿ:ಐಮೊಬೈಲ್ ಪೇ ಆ್ಯಪ್ ಮೂಲಕ ಯಾವುದೇ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಾಕಿ ತಕ್ಷಣ ಪಾವತಿಸಿ

ಈ ಕುರಿತು ಹರ್ಷ ವ್ಯಕ್ತಪಡಿಸಿರುವ ಲತಾ ಅವರು ಚಿಕ್ಕ ವಯಸ್ಸಿನಿಂದಲೂ ನಾನು ಲೆಕ್ಚರ್ ಆಗುವ ಗುರಿ ಇಟ್ಟುಕೊಂಡಿದ್ದು, ಮುಂದೆ ಎನ್ ಇಟಿ ಮುಗಿಸಿ ಪಿಎಚ್.ಡಿ ಮಾಡಿ ಪ್ರಾಧ್ಯಾಪಕಿ ವೃತ್ತಿ ಜೀವನ ಆರಂಭಿಸುವ ಕನಸು ನನಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next