Advertisement

ಅವಳಿ ವಾಣಿಜ್ಯ ಕಟ್ಟಡ ನೆಲಸಮಕ್ಕೆ ನಿರ್ಧಾರ

04:36 PM Jul 17, 2021 | Team Udayavani |

ಮೈಸೂರು: ಶಿಥಿಲಾವಸ್ಥೆ ತಲುಪಿರುವ ಪಾರಂಪರಿಕ ನಗರಿಮೈಸೂರಿನ ಹೆಗ್ಗುರುತು, ಪ್ರಮುಖ ವಾಣಿಜ್ಯ ಕೇಂದ್ರಗಳೂಆಗಿದ್ದ ಲ್ಯಾನ್ಸ್‌ಡೌನ್‌ಬಿಲ್ಡಿಂಗ್‌ ಮತ್ತು ದೇವರಾಜ ಮಾರುಕಟ್ಟೆಅವಳಿ ಕಟ್ಟಡಗಳನ್ನು ನೆಲಸಮ ಗೊಳಿಸಲು ಸರ್ಕಾರಮುಂದಾಗಿದೆ.ಶತಮಾನ ಪೂರೈಸಿದಈಎರಡೂ ಕಟ್ಟಡಗಳು ಮೈಸೂರಿನಹೃದಯ ಭಾಗದಲ್ಲಿದ್ದು, ಸಮರ್ಪಕ ನಿರ್ವಹಣೆ ಕೊರತೆಯಿಂದ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿವೆ.

Advertisement

2012ರಲ್ಲಿ ಲ್ಯಾನ್ಸ್‌ಡೌನ್‌ ಕಟ್ಟಡದ ಒಂದು ಭಾಗ ಕುಸಿದುನಾಲ್ವರು ಮೃತಪಟ್ಟಿದ್ದರೆ, 2016 ಆಗಸ್ಟ್‌28ರಂದುದೇವರಾಜಮಾರುಕಟ್ಟೆಯ ಉತ್ತರ ಭಾಗದಲ್ಲಿರುವ ಸ್ವಾಗತ ಕಮಾನುಕುಸಿದು ಬಿದ್ದಿತ್ತು. ಹೀಗಿದ್ದರೂ ಎರಡೂ ಕಟ್ಟಡವನ್ನುನವೀಕರಿಸದೇ ಹಾಗೆ ಬಿಟ್ಟಿದ್ದರಿಂದ ಅವು ಮತ್ತಷ್ಟುಶಿಥಿಲಗೊಂಡು ಯಾವ ವೇಳೆಯಲ್ಲಾದರೂ ಬೀಳುವ ಸ್ಥಿತಿತಲುಪಿವೆ.

ಮೈಸೂರಿನ ಅಸ್ಮಿತೆ: ಮೈಸೂರಿನ ಪರಂಪರೆ ಹಾಗೂಮೈಸೂರಿಗರಿಗೆ ಅಸ್ಮಿತೆಯಾಗಿರುವ ಈ ಅವಳಿ ಕಟ್ಟಡಗಳುಕಳೆದ ಹತ್ತಿಪ್ಪತ್ತು ವರ್ಷಗಳ ಹಿಂದೆ ಮೈಸೂರು ಆರ್ಥಿಕತೆಯಕೇಂದ್ರವಾಗಿದ್ದವು. ಮೈಸೂರು ನಗರದಲ್ಲಿ ಶತಮಾನದಿಂದವಾಣಿಜ್ಯಾತ್ಮಕವಾಗಿ ನಗರದ ಅರ್ಥಿಕತೆಯನ್ನುಸದೃಢಗೊಳಿಸುವಲ್ಲಿ ಈ ಎರಡೂ ಕಟ್ಟಡಗಳದ್ದು ಸಿಂಹಪಾಲು.ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ವಾಣಿಜ್ಯಾñಕವಾ ‌¾ ಗಿಮೈಸೂರಿಗೆ ಕಾಣಿ ಕೆ ನೀಡಿದ ಅವಳಿ ಕಟ್ಟಡಗಳು ಎಂದೂಹೇಳಲಾಗುತ್ತದೆ.

135 ವರ್ಷ ಹಳೆಯದು: 135 ವರ್ಷಗಳ ಸುದೀರ್ಘ‌ಇತಿಹಾಸ ಹೊಂದಿರುವ ದೇವರಾಜ ಮಾರುಕಟ್ಟೆಯನ್ನುಹತ್ತನೇ ಚಾಮರಾಜ ಒಡೆಯರ್‌ ಮತ್ತು ನಾಲ್ವಡಿ ಕೃಷ್ಣರಾಜಒಡೆಯರ್‌ ನಿರ್ಮಿಸಿದ್ದರು. ಈ ಕಟ್ಟಡದಲ್ಲಿ 1,122ಮಳಿಗೆಗಳಿದ್ದು, 822 ಅಂಗಡಿ ವ್ಯಾಪಾರಿಗಳು  ತಿಂಗಳು ಬಾಡಿಗೆ ಮತ್ತು 300 ಅಂಗಡಿ ವ್ಯಾಪಾರಸ್ಥರು ದಿನದ ಬಾಡಿಗೆಕೊಟ್ಟು ವ್ಯಾಪಾರ ಮಾಡುತ್ತಿದ್ದಾರೆ. ಅಲ್ಲದೆ, ಒಳಭಾಗದಲ್ಲಿ900 ಅಂಗಡಿಗಳಿದ್ದು, ಉಳಿದ 180 ಅಂಗಡಿಗಳು ಹೊರಭಾಗದಲ್ಲಿವೆ. 3,000ಕ್ಕೂ ಹೆಚ್ಚು ಜನರು ಈ ಮಾರುಕಟ್ಟೆಯಲ್ಲಿಉದ್ಯೋಗ ಕಂಡುಕೊಂಡಿದ್ದು, ಪ್ರತಿದಿನ 8ರಿಂದ 10 ಸಾವಿರಮಂದಿ ಮಾರುಕಟ್ಟೆಗೆ ಭೇಟಿ ನೀಡುವುದು ಗಮನಾರ್ಹ.

ಮೈಸೂರಿನ ಆರ್ಥಿಕತೆಯ ನಾಡಿ ಲ್ಯಾನ್ಸ್ಡೌನ್: ಹಲವುತಲೆಮಾರುಗಳ ಅನ್ನಕ್ಕೆ ದಾರಿಯಾಗಿದ್ದ ಹಾಗೂ ನಗರದಆರ್ಥಿಕತೆಗೆ ಮೂಲವಾಗಿದ್ದ ಲ್ಯಾನ್ಸ್‌ಡೌನ್‌ ಕಟ್ಟಡದ ಒಂದುಭಾಗ 2012ರಲ್ಲಿ ಕುಸಿದು ನಾಲ್ವರು ಮೃತಪಟ್ಟಿದ್ದರು. ಬಳಿಕಕಟ್ಟಡದಲ್ಲಿದ್ದ ಎಲ್ಲಾ ಮಳಿಗೆಗಳನ್ನು ಖಾಲಿ ಮಾಡಿಸಿ,ಕಟ್ಟಡವನ್ನು ಪಾಳು ಗೆಡವಲಾಯಿತು.ಅಂದಿನಿಂದಈವರೆಗೂಕಟ್ಟಡ ಸಂಪೂರ್ಣವಾಗಿ ಪಾಳು ಬಿದ್ದಿದ್ದು, ಕುಸಿದು ಬೀಳುವಹಂತಕ್ಕೆ ತಲುಪಿದೆ.129 ವರ್ಷ ಹಳೆಯದಾದ ಲ್ಯಾನ್ಸ್‌ಡೌನ್‌ ಕಟ್ಟಡವನ್ನು1892ರಲ್ಲಿ ಮೈಸೂರು ಸಂಸ್ಥಾನಕ್ಕೆ ಭೇಟಿ ನೀಡಿದ್ದ ವೈಸರಾಯ್‌ಲ್ಯಾನ್ಸ್‌ಡೌನ್‌ ನೆನಪಿಗಾಗಿ ಅಂದಿನ ಮಹಾರಾಜರು ಈಕಟ್ಟಡವನ್ನುವಾಣಿಜ್ಯ ಉದ್ದೇಶಕ್ಕಾಗಿ ನಿರ್ಮಿಸಿ, ಕಟ್ಟಡಕ್ಕೆಲ್ಯಾನ್‌Õಡೌನ್‌ ಎಂದು ನಾಮಕರಣಮಾಡಿದ್ದರು‌ª .

Advertisement

ನವೀಕರಣ ಕಾರ್ಯವೂ ಆಗಿತ್ತು: ಲ್ಯಾನ್ಸ್‌ಡೌನ್‌ ಕಟ್ಟಡಕುಸಿದ ನಂತರ ಸರ್ಕಾರ ನವೀಕರಣಕ್ಕೆ 3.50 ಕೋಟಿ ಹಣನೀಡಿತ್ತು. ನಂತರ ನವೀಕರಣ ಕೆಲಸ ಆರಂಭಿಸಿದ ಪಾಲಿಕೆ 2ಕೋಟಿ ರೂ. ವೆಚ್ಚದಲ್ಲಿ ಕೆಲಸವನ್ನು ಮಾಡಿದೆ. ಒಳಭಾಗದಲ್ಲಿವಿನ್ಯಾಸ ಕಾರ್ಯ ಮುಗಿಸಿತ್ತು. ಕಟ್ಟಡದ ಹೊರಭಾಗದಲ್ಲಿಪ್ಲಾಸ್ಟಿಂಗ್‌, ಪೇಂಟಿಂಗ್‌ ಕೆಲಸ ಬಾಕಿ ಉಳಿಸಿತ್ತು. ಮತ್ತೆ ಕೆಲಸಸಗಿñ§ ‌ ಗೊಳಿಸಿದ ಹಿನ್ನೆಲೆಕಟ್ಟಡ ಮತ್ತಷ್ಟು ಶಿಥಿಲಗೊಂಡಿತು.

ಕಟ್ಟಡ ನೆಲಸಮಕ್ಕೆ ವಿರೋಧ: ಮಾರುಕಟ್ಟೆಯಲ್ಲಿ Öಲವ ಾರುವರ್ಷಗಳಿಂದ ವ್ಯಾಪಾರ ನಡೆಸುತ್ತಿÃುವ ‌ ಮೂಲಮಳಿಗೆದಾರರು ಪಾಲಿಕೆಗೆ ಕನಿಷ್ಠ ಬಾಡಿಗೆ ಪಾವತಿಸಿ, ಹೆಚ್ಚುಬಾಡಿಗೆಗೆ ಮತ್ತೂಬ್ಬ ವ್ಯಾಪಾರಿಗೆ ನೀಡಿದ್ದಾರೆ. ಇದುಒಬರಿº ಂದ ಐದಾರು ಮಂದಿ ಕೈ ಬದಲಿಸಿರುವುದು ಉಂಟು.ಒಂದು ವೇಳೆಕಟ್ಟಡನೆಲÓವ ‌ ುಗೊಳಿಸಿದರೆ ಬಾಡಿಗೆಯಿಂದಲೇಸಂಪಾದನೆ ಕಂಡುಕೊಂಡಿರುವ ನೂರಾರು ಮಂದಿಯಆದಾಯಕ್ಕೆ ಕೊಕ್ಕೆ ಬಿದ್ದರೆ, ಇತ್ತ ಪಾಲಿಕೆಯಿಂದನಿರ್ಮಾಣವಾಗುವ ನೂತನ ಮಳಿಗೆಗೆ Öಚ ೆ ುc ಬಾಡಿಗೆತೆರಬೇಕಾಗುತ್ತದೆ. ಈ ಉದ್ದೇಶದಿಂದ ಹಲವು ವ್ಯಾಪಾರಿಗಳುಕಟ್ಟಡ ನೆಲಸಮಕ್ಕೆ ವಿರೊಧ ವ್ಯಕ್ತಪಡಿಸಿ ನ್ಯಾಯಾಲಯದಮೊರೆ ಹೋಗಿದ್ದರು.

ಸತೀಶ್ದೇಪುರ

Advertisement

Udayavani is now on Telegram. Click here to join our channel and stay updated with the latest news.

Next